ಎನ್ಡಿಎ ಸರ್ಕಾರ ಕೆಡವುದು ಕಾಂಗ್ರೆಸ್ ಉದ್ದೇಶವಲ್ಲ - ಅರ್ಜುನ್ ಸಿಂಗ್
ಬೆಂಗಳೂರು : ಎಂಭತ್ತೊಂದನೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪೂರ್ಣಾಧಿವೇಶನ ರಂಗೇರುತ್ತಿದ್ದಂತೆ ಕಾರ್ಯಕರ್ತರು ವಾಜಪೇಯಿ ಡೌನ್ ಡೌನ್ ಕೂಗತೊಡಗಿದರು. ಧುರೀಣರು ಕೊಟ್ಟ ಕರೆ ಈ ಕೂಗನ್ನು ತಾರಕಕ್ಕೇರಿಸಿತು. ಕಾಂಗ್ರೆಸ್ನ ಗೊತ್ತುವಳಿಗಳು ಧುರೀಣರ ಬಾಯಿಂದ ಒಂದೊಂದಾಗಿ ಬಿಚ್ಚಿಕೊಂಡವು....
- ಎನ್ಡಿಎ ಸರ್ಕಾರ ಉರುಳಿಸುವುದೇ ನಮ್ಮ ಏಕಮಾತ್ರ ಧ್ಯೇಯವಲ್ಲ. ಜಾತ್ಯತೀತ ತತ್ತ್ವಗಳಿಗೆ ಬದ್ಧವಾದ ಸರ್ಕಾರವನ್ನು ದೇಶಕ್ಕೆ ಕೊಡುವುದು ನಮ್ಮ ಉದ್ದಿಶ್ಯ- ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್
- ಜಾತ್ಯತೀತ ತತ್ತ್ವಗಳಿಗೆ ಬದ್ಧವಾಗಿರುವ ಕಾಂಗ್ರೆಸ್ ತನ್ನ ಧ್ಯೇಯಗಳಿಗೆ ಸರಿ ಹೊಂದುವ ಪಕ್ಷಗಳೊಡನೆ ಮಾತ್ರ ಚುನಾವಣಾ ಒಡಂಬಡಿಕೆ ಮಾಡಿಕೊಳ್ಳುತ್ತದೆ
- ಪಚ್ಮಾರಿ ಅಧಿವೇಶನದ ಗೊತ್ತುವಳಿಗಳ ಬಗ್ಗೆ ಎದ್ದಿರುವ ಗೊಂದಲಗಳು ಸುಖಾ ಸುಮ್ಮನೆ ತಲೆಕೆಡಿಸಿವೆ. ಆದರೆ ಕಾಂಗ್ರೆಸ್ ಒಡಂಬಡಿಕೆ ವೇಳೆ ತನ್ನ ತತ್ತ್ವಗಳನ್ನು ಬಲಿಕೊಡುವುದಿಲ್ಲ.
- ಅಲ್ಪ ಸಂಖ್ಯಾಕರು ಮತ್ತಿತರ ದುರ್ಬಲರ ಹಿತಾಸಕ್ತಿ ಕಾಪಿಡಲು ಕಾಂಗ್ರೆಸ್ ಸದಾ ಸಿದ್ಧ
- ನೈತಿಕ ಹೊಣೆ ಹೊತ್ತು ವಾಜಪೇಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ
- ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಆದರೆ ಅಲ್ಲಿನ ಮಸೀದಿ ಒಡೆದದ್ದಕ್ಕೆ ಧಿಕ್ಕಾರ. ಇಂಥಾ ಕ್ಷುಲ್ಲಕ ವರ್ತನೆಗೆ ಬಿಜೆಪಿ ಈಗಾಗಲೇ ಹೊಡೆತ ತಿಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಅದರ ಸರ್ಕಾರ ಉರುಳಿ ಬಿದ್ದದ್ದು ಮಸೀದಿ ಒಡೆದದ್ದಕ್ಕೇ
- ಕೋಮುವಾದಿ ಪಕ್ಷಗಳನ್ನು ಮಡಿಲಿಗೆ ಕಟ್ಟಿಕೊಂಡು, ಎನ್ಡಿಎ ಅನ್ನುವ ಬೋರ್ಡು ಹಾಕಿಕೊಂಡಿರುವ ಸರ್ಕಾರದಿಂದ ಜನಹಿತ ಕಾಪಾಡುವುದು ಅಸಾಧ್ಯ
- ಎನ್ಡಿಎ ಆರ್ಥಿಕ ನೀತಿಯಂತೂ ಶ್ರೀಸಾಮಾನ್ಯನನ್ನು ತುಳಿಯುವಂತಿದೆ. ರೈತರನ್ನು ದೇವರೇ ಕಾಪಾಡಬೇಕು. ಅಂಥಾದರಲ್ಲೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications