Get Updates
Get notified of breaking news, exclusive insights, and must-see stories!

ಸಿಂಧೂ, ಬ್ರಹ್ಮಪುತ್ರ ದರ್ಶನ ಮಾದರಿಯಲ್ಲಿ ಕಾವೇರಿ ದರ್ಶನ

ಮಡಿಕೇರಿ : ಭಾರತ ಸರಕಾರ ಈ ಹಿಂದೆ ನಡೆಸಿದ್ದ ಸಿಂಧೂ ದರ್ಶನ, ಬ್ರಹ್ಮಪುತ್ರ ದರ್ಶನ ಕಾರ್ಯಕ್ರಮಗಳ ಮಾದರಿಯಲ್ಲೇ ಕಾವೇರಿ ದರ್ಶನ ಎಂಬ ಉತ್ಸವ ನಡೆಸಲು ಕೊಡಗು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ. ಈ ಉತ್ಸವದ ಮೂಲಕ ಕನ್ನಡ ನಾಡಿನ ಜೀವನದಿ ಕಾವೇರಿಯ ಹಿರಿಮೆಯನ್ನು ರಾಷ್ಟ್ರಾದ್ಯಂತ ಸಾರುವುದಲ್ಲದೇ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವುದು ಪಂಚಾಯ್ತಿ ಉದ್ದೇಶ.

ಈ ಸಂಬಂಧ ಕಾವೇರಿ ದರ್ಶನ ಕಾರ್ಯಕ್ರಮ ನಡೆಸಲು 94 ಲಕ್ಷ ರುಪಾಯಿಗಳ ಪ್ರಸ್ತಾವನೆಯಾಂದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಈ ವಿಷಯವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ತಿಳಿಸಿದ್ದಾರೆ. ಪಂಚಾಯ್ತಿಯ ಆಯವ್ಯಯ ಭಾಷಣ ಮಾಡುತ್ತಿದ್ದ ಅವರು, ಇದಕ್ಕಾಗಿ ಪಂಚಾಯ್ತಿ ವತಿಯಿಂದ 2000-01ನೇ ಸಾಲಿನಲ್ಲಿ 5 ಲಕ್ಷ ರುಪಾಯಿ ಒದಗಿಸಲಾಗುವುದು ಎಂದರು.

ಕಾವೇರಿ ದರ್ಶನ ಉತ್ಸವವನ್ನು ಕಾವೇರಿ ಹರಿಯುವ 760 ಕಿ.ಮೀಟರ್‌ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ನಡೆಸುವ ಉದ್ದೇಶವಿದೆ ಎಂದೂ ಅವರು ಹೇಳಿದರು. ಕರ್ನಾಟಕ ಉತ್ಸವ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಸಂಗೀತ, ನಾಟಕ, ನೃತ್ಯವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದರು.

ಉತ್ಸವದ ಅಂಗವಾಗಿ ವಸ್ತು ಪ್ರದರ್ಶನ, ಸ್ಮರಣ ಸಂಚಿಕೆ, ವಿಚಾರಗೋಷ್ಠಿಗಳೇ ಅಲ್ಲದೆ ಉತ್ಸವದ ನೆನಪು ಸದಾ ಉಳಿಯುವಂತೆ ಮಾಡಲು 40 ಲಕ್ಷ ರುಪಾಯಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ಕಲಾ ಭವನವೊಂದನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದೂ ಅವರು ತಿಳಿಸಿದರು.

ತಲಕಾವೇರಿಯೂ ಸೇರಿದಂತೆ, ಕೊಡಗಿನ ಸುತ್ತಮುತ್ತಲ ಪ್ರದೇಶಗಳಲ್ಲಿ, ಕೋಟೆ, ಅಭಯಾರಣ್ಯವೇ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿದ್ದು, ಈ ಎಲ್ಲ ಐತಿಹಾಸಿಕ ಹಾಗೂ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಭವ್ಯ ಪ್ರವಾಸಿ ತಾಣಗಳತ್ತ ದೇಶ - ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವುದು ಕಾವೇರಿ ದರ್ಶನದ ಮಹತ್ತರ ಉದ್ದೇಶವಾಗಿದೆ ಎಂದರು. ಇದರಿಂದಾಗಿ ಕೊಡಗು ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆಯಲಿದೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+