ಸಿಂದಗಿ ಬಳಿಯ ಈ ಊರಿಗೆ ಸ್ವಾತಂತ್ರ್ಯ ಬಂದಿದ್ದು ಮೊನ್ನೆಯಷ್ಟೇ!
ಸಿಂದಗಿ : ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ? ಎಂದರೆ, ಶಾಲಾ ಬಾಲಕನೂ ಕೂಡ 1947 ಎಂದು ಹೇಳಿ ಬಿಡುತ್ತಾನೆ. ಆದರೆ, ಸಿಂದಗಿಗೆ ಕೇವಲ 45 ಕಿ.ಮೀಟರ್ ದೂರದಲ್ಲಿರುವ ಹಾಳಗುಂಡಕನಾಳ ಗ್ರಾಮಸ್ಥರನ್ನು ನೀವು ಈ ಪ್ರಶ್ನೆ ಕೇಳಿದರೆ, ಅವರು ಅಂಜದೆ, ಅಳುಕದೆ, ತಮಗೆ ಸ್ವಾತಂತ್ರ್ಯ ಸಿಕ್ಕಿದ್ದು 2001ರಲ್ಲಿ ಎಂದೇ ಹೇಳುತ್ತಾರೆ?
ಏನು ದೇಶಕ್ಕೇ ಸ್ವಾತಂತ್ರ್ಯ ಸಿಕ್ಕರೂ ಹಾಳಗುಂಡಕನಾಳದ ಜನತೆಗೆ ಸ್ವಾತಂತ್ರ್ಯ ದೊರಕಿರಲಿಲ್ಲವೇ? ಎಂದು ಹುಬ್ಬೇರಿಸುವ ಅಗತ್ಯ ಇಲ್ಲ. ದೇಶಕ್ಕೆ ಸ್ವತಂತ್ರ ಬಂದು 53 ವರ್ಷಗಳು ಕಳೆದ ಬಳಿಕ ಈ ಊರಿಗೆ ಈಗ ಬಸ್ ಬಂದಿದೆ. ಬಸ್ಸೇ ಕಾಣದ ಊರಿನ ಜನತೆ ತಮ್ಮೂರಿಗೆ ಬಸ್ ಬಂದ ದಿನವೇ ತಮಗೆ ಸ್ವಾತಂತ್ರ್ಯ ದೊರಕಿದ್ದು ಎನ್ನುತ್ತಾರೆ.
ಈ ಊರಿನಿಂದ ಮುಖ್ಯರಸ್ತೆಗೆ ಅಥವಾ ತಾಲೂಕು ಕೇಂದ್ರಕ್ಕೆ ಬರಲೂ ಆಗದಂತ ಹದಗೆಟ್ಟ ರಸ್ತೆ ಇತ್ತು. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಜನಪ್ರತಿನಿಧಿಗಳು ರಸ್ತೆ ಮಾಡಿಸುವ ಭರವಸೆ ನೀಡುತ್ತಲೇ ಬಂದಿದ್ದರು. ಕಾಲ್ನಡಿಗೆಗೂ ಅಯೋಗ್ಯವಾಗಿದ್ದ ರಸ್ತೆಯಲ್ಲಿ ಜನ ಕತ್ತೆಗಳನ್ನೇ ತಮ್ಮ ಸಾಗಣೆಯ ವಾಹನವಾಗಿ ಬಳಸುತ್ತಿದ್ದರು. ಈಗಲೂ ಇದಕ್ಕೆ ಮೂಕ ಸಾಕ್ಷಿಯಾಗಿ ಹಲವಾರು ಕತ್ತೆಗಳು ಈ ಊರಿನಲ್ಲಿವೆ.
ವಾಟಾಳ್ ನಾಗರಾಜರ ಪ್ರತಿಭಟನೆಗೆ, ಮಳೆ ಆಗದಿದ್ದಾಗ ಮದುವೆಗೆ ಅಣಿಯಾಗಿ ಸುದ್ದಿ ಮಾಡುತ್ತಿದ್ದ ಕತ್ತೆಗಳು ಇಲ್ಲಿ ಸದ್ದು ಗದ್ದಲವಿಲ್ಲದೆ, ಹಾಳಗುಂಡಕನಾಳದ ಜನರ ಸೇವೆ ಮಾಡುತ್ತಾ ದಿನ ಕಳೆಯುತ್ತಿದ್ದವು. ಈಗ ಬಸ್ ಬಂದಮೇಲೆ ಕತ್ತೆ ಚಾಕರಿಗೆ ತೆರೆಬಿದ್ದಿದೆ.
ಈ ಊರಿನ ಸ್ಥಿತಿ ಎಷ್ಟರಮಟ್ಟಿಗಿತ್ತೆಂದರೆ, ಬಸ್ಸೂ ಕಾಣದ ಊರಿಗೆ ಹೆಣ್ಣು ಕೊಡುವುದು ಹೇಗೆ ಎಂದು ಜನ ಹಿಂಜರಿಯುತ್ತಿದ್ದುದೂ ಉಂಟು. ಈಗ ಶಾಸಕ ಶರಣಪ್ಪ ಸುಣಗಾರ ಅವರು ಊರಿಗೆ ಸಂಪರ್ಕ ರಸ್ತೆ ಕಲ್ಪಿಸಿದ್ದಷ್ಟೇ ಅಲ್ಲದೆ ಬಸ್ ಸೌಕರ್ಯವನ್ನೂ ಕಲ್ಪಿಸಿದರು. ಊರಿಗೆ ಬಸ್ ಬಂದ ದಿನ ಜನ ತಮಗೆ ಸ್ವತಂತ್ರ ಬಂತು ಎಂದು ಹರ್ಷದಿಂದ ಕುಣಿದು ಕುಪ್ಪಳಿಸಿದರು.
ಈ ಹರ್ಷಕ್ಕೆ ನಿಜವಾದ ಕಾರಣ ಇನ್ನಾದರೂ ತಮ್ಮೂರಿಗೆ ನೆರೆಯೂರಿನವರು ಹೆಣ್ಣು ಕೊಡಲು ಹಿಂದೇಟು ಹಾಕುವುದಿಲ್ಲ ಎಂಬುದೇ ಆನಂದ ಎಂದು ಮತ್ತೆ ಹೇಳುವ ಅಗತ್ಯ ಇಲ್ಲ. ಸ್ವಾತಂತ್ರ್ಯ ಬಂದ ನಂತರ ಈ ಊರಿಗೆ ಬಸ್ ಬಂತೋ, ಬಸ್ ಬಂದ ನಂತರ ಈ ಊರಿಗೆ ಸ್ವಾತಂತ್ರ್ಯ ಬಂತೋ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಕತ್ತೆಗಳಿಗಂತೂ ಇನ್ನು ಮುಂದೆ ಖಂಡಿತಾ ಸ್ವತಂತ್ರ ಸಿಕ್ಕಂತೆಯೇ!
(ರಾಯಚೂರು ಪ್ರತಿನಿಧಿಯಿಂದ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications