ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಮನಸ್ಸನ್ನು ನಿಮ್ಮ ಹತೋಟಿಯಲ್ಲಿಡಲು ಶತ ಪ್ರಯತ್ನ ಮಾಡುತ್ತಾ ಸುಸ್ತಾಗುತ್ತೀರಿ. ಆದರೆ ಹೆದರಿಕೆ ಬೇಡ, ಇನ್ನೊಬ್ಬರಿಗೆ ಹಾನಿ ಮಾಡಿಯೇನು ಎನ್ನುಚಿ ಪ್ರಜ್ಞೆಯೇ ನಿಮ್ಮನ್ನು ಇತರರ ದೃಷ್ಠಿಯಲ್ಲಿ ಒಳ್ಳೆಯವರನ್ನಾಗಿ ಮಾಡುತ್ತದೆ. ಧನಲಾಭವಿದೆ.ವೃಷಭ :ನಿಮಗೆದುರಾಗುವ ಕೆಲವು ಅನನುಕೂಲ ಸನ್ನಿವೇಶಗಳನ್ನು ನಿರಾಳವಾಗಿ ನಿಭಾಯಿಸಿಬಿಟ್ಟರೆ ಇವತ್ತೆಲ್ಲಾ ಸುಂದರ ದಿನ. ಮನೆಯಲ್ಲಿ ಶುಭಕಾರ್ಯ ಇಟ್ಟುಕೊಳ್ಳಲು ಇದು ಸುಸಂದರ್ಭ.
ಮಿಥುನ : ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಖುಷಿಯಲ್ಲಿ ಎಡವದಂತೆ ನೋಡಿಕೊಳ್ಳಿ. ಮತ್ತೆ ನಿಮ್ಮಿಂದ ಬಹುದೂರ ಹೋಗಿರುವ ಓದು, ವ್ಯಾಸಂಗಗಳನ್ನು ಬಳಿಗೆ ಕರೆದುಕೊಳ್ಳುವ ಯೋಚನೆ ಇದೆಯಾ ?
ಕಟಕ : ಇವತ್ತು ಯಾವ ಕೆಲಸ ಕಾರ್ಯಗಳಲ್ಲಿಯೂ ಧನಲಾಭವಾಗುವ ಹಾಗೆ ಕಾಣುವುದಿಲ್ಲ. ಆದ್ದರಿಂದ ಸಣ್ಣ ಪುಟ್ಟ ಬಾಕಿ ಕೆಲಸಗಳನ್ನೆಲ್ಲಾ ಇಂದು ಮುಗಿಸಿಬಿಡಿ. ದೇವಿ ಆರಾಧನೆಯಿಂದ ಶುಭವಾಗಬಹುದು.
ಸಿಂಹ : ನಿಮ್ಮ ವಿವೇಕಯುತ ವರ್ತನೆಯಿಂದ ಆಫೀಸು ಕೆಲಸಗಳಲ್ಲಿ ಜಯ ಸಾಧಿಸುತ್ತೀರಿ. ಎಂದೋ ಹಾಕಿಕೊಂಡ ಯೋಜನೆ ಸಂಪೂರ್ಣವಾದ ಖುಷಿಗೆ ಇವತ್ತು ಸಂಜೆ ಪಾರ್ಟಿ ಇಟ್ಟುಕೊಳ್ಳುತ್ತೀರಾ ?
ಕನ್ಯಾ : ಈಗ ನೀರಿನಂತೆ ಹಣ ಖರ್ಚು ಮಾಡಲು ನಿಮ್ಮ ಬಳಿ ಹಣ ಇದೆ. ಆದರೆ ನಿಮ್ಮ ಮನೆ, ಪರಿಸ್ಥಿತಿಗಳನ್ನು ಮರೆತುಬಿಟ್ಟೀರಾ ಜೋಕೆ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಸಲ್ಲ.
ತುಲಾ : ಮನಸ್ಸಿನ ಕ್ಲೇಷಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಮನೆಯಲ್ಲಿನ ಕೋಳಿ ಜಗಳಗಳು ಎಷ್ಟೆಂದರೂ ಕಡಿಮೆ ಆಯುಸ್ಸಿನದು ಅಲ್ವೇ ? ಕಲಿಕೆಯಲ್ಲಿ ನಿಮ್ಮ ಆಸಕ್ತಿ ನಿಮಗೆ ಕೀರ್ತಿ ತಂದುಕೊಡಲಿದೆ.
ವೃಶ್ಚಿಕ : ಮನೆ ಮಂದಿಯಾಂದಿಗಿನ ಪಟ್ಟಾಂಗದಿಂದ ದಿನವಿಡೀ ಬೀಗುತ್ತಿರುತ್ತೀರಿ. ಮನಸ್ಸಿನೊಳಗಿನ ಯೋಚನೆಗಳನ್ನು ನೋವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದಾ ?
ಧನಸ್ಸು : ದೂರದೂರಿಗೆ ನೀವು ಪ್ರವಾಸ ಯೋಜನೆಗಳನ್ನು ಪ್ಲಾನ್ ಮಾಡುವಾಗ ಎರಡೆರಡು ಸಾರಿ ಜೇಬು ತಟ್ಟಿ ನೋಡಿಕೊಳ್ಳಬೇಕು ಮತ್ತೆ. ಮಗಳಿಂದ ಶುಭವಾರ್ತೆ ನಿರೀಕ್ಷಿಸಿ.
ಮಕರ : ಮಾಡಬೇಕಾಗಿರುವ ರಾಶಿ ಕೆಲಸ ಮುಂದಿಟ್ಟುಕೊಂಡು ಸಣ್ಣ ಪುಟ್ಟ ಕೆಲಸಗಳಿಗೇ ಸಮಯ ವ್ಯರ್ಥ ಮಾಡಬೇಡಿ. ಪ್ರವಾಸ ಸದ್ಯಕ್ಕೆ ಕೈಗೂಡುವುದಿಲ್ಲ ಆದ್ದರಿಂದ ಕನಸುಗಳ ಗೋಪುರ ಬೇಡ. ಕೋರ್ಟು ವ್ಯವಹಾರಗಳನ್ನು ಮುಂದೂಡುವುದು ಒಳ್ಳೆಯದು.
ಕುಂಭ : ಮೊಂಡು ವಾದದಿಂದ ಮಾತಿನಲ್ಲಿ ಜಯ ಸಿಕ್ಕರೂ, ಕೃತಿಯಲ್ಲಿ ಜಯ ಸಿಗದು ಎಂಬುದು ನಿಮಗೆ ತಿಳಿದಿದೆ. ವಾಸ್ತವದಲ್ಲಿ ನೀವು ಎದುರಿಸುತ್ತಿರುವ ಕಷ್ಟಗಳನ್ನು ಒಪ್ಪಿಕೊಳ್ಳಿ. ಕನಸುಗಳನ್ನೇ ಕಾಣುತ್ತಾ ಇದ್ದರೆ ಹೇಗೆ ?
ಮೀನ : ಮಹತ್ವದ ಕೆಲಸ ಕಾರ್ಯಗಳಲ್ಲಿ ಆಗುವ ಜಯದಿಂದ ಖುಷಿ ಪಡುತ್ತೀರಿ. ಸ್ನೇಹಿತರೊಂದಿಗೆ ಸುಳ್ಳು ಮಾತುಗಳಿಂದ ಜಯಿಸುವುದು ಸಾದ್ಯವಾಗುವುದಿಲ್ಲ ಅಂತ ತಿಳಿದ ಮೇಲೂ ಯಾಕೆ ವ್ಯರ್ಥ ಪ್ರಯತ್ನ ?
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications