ಆಂಧ್ರದಲ್ಲಿ ನೀವೀಗ ಹುಲಿ ಸಿಂಹಗಳನ್ನೂ ಸಾಕಬಹುದು
ಹೈದರಾಬಾದ್ : ಆಂಧ್ರ ಪ್ರದೇಶ ಸರಕಾರ ಹುಲಿ ಸಿಂಹಗಳಂತಹ ಪ್ರಾಣಿಗಳನ್ನೂ ಸಾಕಲು ನಾಗರಿಕರಿಗೆ ಅನುಮತಿ ನೀಡಲು ನಿರ್ಧರಿಸಿದೆ. ಆದರೆ ಒಂದು ಕಂಡಿಷನ್. ಅವುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಸಂಭ್ರಮಿಸುವಂತಿಲ್ಲ.
ಆಂಧ್ರಪ್ರದೇಶದ ಮೂರು ಝೂವಲಾಜಿಕಲ್ ಪಾರ್ಕ್ಗಳಲ್ಲಿ ಯಾವುದಾರೂ ಒಂದು ಪಾರ್ಕ್ನ ಪಂಜರದೊಳಗೆ ನಿಮ್ಮ ಪ್ರೀತಿಯ ಹುಲಿಯೋ ಸಿಂಹವನ್ನೋ ಸಾಕಬಹುದು. ಅವುಗಳನ್ನು ಮುದ್ದಿಸಬೇಕೆಂದರೆ ಆ ಪಾರ್ಕಿಗೇ ಹೋಗಬೇಕು.
ಅಲ್ಲಿನ ಅರಣ್ಯ ಖಾತೆ ಸಚಿವ ಸಿ. ಎಚ್. ಅಯ್ಯಣ್ಣ ಪಟ್ರುಡು ಈ ವಿಷಯವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ತಿಳಿಸಿದ್ದಾರೆ. ದಾನಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಮತ್ತು ಪ್ರಾಣಿ ದಯಾಪರರಿಗೆ ಇದೊಂದು ಒಳ್ಳೆಯ ಅವಕಾಶ. ಸಾಕಲು ಹುಲಿ ಸಿಂಹಗಳೇ ಆಗಬೇಕೆಂದಿಲ್ಲ. ತಮಗಿಷ್ಟವಾದ ಹಕ್ಕಿಗಳನ್ನೋ, ಪ್ರಾಣಿಗಳನ್ನು ಈ ಝೂನಲ್ಲಿಟ್ಟು ಅವುಗಳ ಯೋಗ ಕ್ಷೇಮ ನೋಡಿಕೊಳ್ಳಬಹುದು. ಒಮ್ಮೆ ತಮ್ಮ ಪ್ರೀತಿಯ ಪ್ರಾಣಿಯನ್ನು ಈ ಝೂನಲ್ಲಿಟ್ಟು ಬೆಳೆಸಲು ಆರಂಭಿಸಿದ ನಂತರ ಅವುಗಳ ಎಲ್ಲ ಖರ್ಚು ವೆಚ್ಚವನ್ನು ಮಾಲಿಕರೇ ಭರಿಸಬೇಕು.
ಇದರಿಂದಾಗಿ ಅಳಿಯುತ್ತಿರುವ ಕಾಡು ಪ್ರಾಣಿಗಳನ್ನು ಸಂರಕ್ಷಿಸುವ ಕೆಲಸ ಮತ್ತು ಅಪರೂಪವಾಗುತ್ತಿರುವ ಪ್ರಾಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಎರಡೂ ಆದಂತಾಗುತ್ತದೆ ಎಂದು ಅಯ್ಯಣ್ಣ ಹೇಳುತ್ತಾರೆ. ಒಂದು ಸಿಂಹ ಅಥವಾ ಹುಲಿಯನ್ನು ನೀವು ಸಾಕಬೇಕೆಂದುಕೊಂಡಿದ್ದರೆ ವರ್ಷಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಆಂಧ್ರ ಪ್ರದೇಶ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಿದೆ ಎಂದು ಸಚಿವ ಅಯ್ಯಣ್ಣ ಹೇಳಿದರು.
(ಯುಎನ್ಐ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications