ವಿಧಾನಸಭೆ - ರಸ್ತೆ : ಸದ್ದು ಮಾಡಿದ ಭಾರತೀಯ ಜನತಾ ಪಕ್ಷ
ಬೆಂಗಳೂರು : ಗುರುವಾರ ಬೆಂಗಳೂರಿನ ತುಂಬೆಲ್ಲಾ ಬಿಜೆಪಿಯದೇ ಸದ್ದು. ವಿಧಾನಸಭೆಯಲ್ಲೂ ಹಾಗೂ ರಸ್ತೆಯಲ್ಲಿ . ವಿಧಾನಸಭೆಯಲ್ಲಿ ಬುಧವಾರದ ಚಾಳಿಯನ್ನೇ ಬಿಜೆಪಿಯ ಸದಸ್ಯರು ಮುಂದುವರಿಸಿದರೆ, ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಹೊಣೆಯನ್ನು ಕಾರ್ಯಕರ್ತರು ಹೊತ್ತಿದ್ದರು.
ವಿಧಾನಸಭೆಯಲ್ಲಿ ಬುಧವಾರದ ದೃಶ್ಯವೇ ಮುಂದುವರೆಯಿತು. ಬಿಜೆಪಿಯ ಸದಸ್ಯರ ಸರ್ಕಾರಿ ವಿರೋಧಿ ಘೋಷಣೆಗಳು, ಆಡಳಿತ ಪಕ್ಷದ ಸಮರ್ಥನೆ- ಧಿಕ್ಕಾರಗಳ ಸದ್ದಿನ ನಡುವೆ ಉಡುಗಿಹೋದ ಸದನವನ್ನು ಸಭಾಪತಿ ಎಂ.ವಿ. ವೆಂಕಟಪ್ಪ ಅನಿವಾರ್ಯವಾಗಿ ಎರಡು ಬಾರಿ ಮುಂದೂಡಬೇಕಾಯಿತು.
ಸದನ ಪ್ರಾರಂಭವಾಗಿದ್ದೇ ತಡ, ರೈತರ ಕಣ್ಣೀರೊರೆಸಲಾಗದ, ಅವರ ಆತ್ಮಹತ್ಯೆಗೆ ಕಾರಣವಾಗುತ್ತಿರುವ ಪರಿಸ್ಥಿತಿ ಹೋಗಲಾಡಿಸಲಾರದ ಆಡಳಿತ ಪಕ್ಷವನ್ನು ಘೋಷಣೆಗಳ ಮೂಲಕ ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಸಭಾಪತಿ ಸದನವನ್ನು ಮಧ್ಯಾಹ್ನ 1 ಗಂಟೆವರೆಗೆ ಮುಂದೂಡಿದರು. ಮತ್ತೆ ಸೇರಿದ ಸಭೆಯಲ್ಲೂ ಕಾಂಗ್ರೆಸ್ಸು- ಬಿಜೆಪಿ ಸದಸ್ಯರು ಒಬ್ಬೊರತ್ತ ಒಬ್ಬರು ಬೆಟ್ಟು ತೋರಿಸಿ, ಕೂಗಾಡಲು ಶುರುವಿಟ್ಟರು. ‘ಸದನದ ಬಾವಿ’ವರೆಗೂ ನುಗ್ಗಿದ ಸದಸ್ಯರನ್ನು ನಿಯಂತ್ರಿಸಲಾಗದ ಸಭಾಪತಿ ಮತ್ತೆ ಸದನವನ್ನು 3ಗಂಟೆಗೆ ಮುಂದೂಡಿದರು.
ಮಗದೊಮ್ಮೆ ಕಲಾಪದಲ್ಲಿ ಘೋಷಣೆಗಳೇ ಪ್ರತಿಧ್ವನಿಸಿದಾಗ, ಸಭಾಪತಿ ಹಿಂದಿನ ದಿನವೂ ಕಲಾಪಗಳು ನಡೆದಿಲ್ಲ. ಕುಂತು ಚರ್ಚಿಸದೆ ಹೀಗೆ ಕೂಗಾಡಿದರೆ ಸಮಸ್ಯೆ ಬಗೆಹರಿಯದು ಎಂದಾಗ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು. ಆಹಾರಧಾನ್ಯ ಖರೀದಿಯನ್ನು ಭಾರತೀಯ ಆಹಾರ ನಿಗಮ ನಿಲ್ಲಿಸಿರುವುದನ್ನು ಪ್ರಸ್ತಾಪಿಸುವುದು ಕಾಂಗ್ರೆಸಿನ ಉದ್ದಿಶ್ಯ. ರಾಜ್ಯದ ರೈತರ ಬೆಳೆಗೆ ಕುಸಿದಿರುವ ಬೆಂಬಲ ಬೆಲೆಯ ಪ್ರಸ್ತಾಪ ವಿರೋಧ ಪಕ್ಷ ಬಿಜೆಪಿಯದ್ದು. ಈ ನಡುವೆ ಎರಡೂ ಪಕ್ಷಗಳ ಉದ್ದಿಶ್ಯ ಗದ್ದಲದ ಸದ್ದಿನ ಯಾವುದೋ ಮೂಲೆ ಸೇರಿತೇ ಹೊರತು ಸಭೆಯಲ್ಲಿ ಯಾರಿಗೂ ಮನವರಿಕೆಯಾಗುವಂತೆ ಹೊಮ್ಮಲಿಲ್ಲ.
ರೈತ ವಿರೋಧಿ ಸರ್ಕಾರದ ನೀತಿ ಪ್ರತಿಭಟಿಸಿ ಭಾರೀ ಮೆರವಣಿಗೆ
ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯೆಂದು ಆರೋಪಿಸಿ ಭಾರತೀಯ ಜನತಾಪಕ್ಷದ ಸುಮಾರು 25 ಸಾವಿರ ಕಾರ್ಯಕರ್ತರು ಗುರುವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಮಲ್ಲೇಶ್ವರಂ ಆಟದ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ಶೇಷಾದ್ರಿ ರಸ್ತೆಯಲ್ಲಿನ ವಿಜ್ಞಾನ ಮತ್ತು ಕಲಾ ಕಾಲೇಜು ಬಳಿ ಕೊನೆಗೊಂಡಿತು. ವಿದ್ಯುತ್ ದರ ಏರಿಕೆ, ಅಸಮರ್ಪಕ ಮೆಕ್ಕೆಜೋಳ ಖರೀದಿ ಮುಂತಾದ ಜನ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರದ ನೀತಿಯನ್ನು ಪ್ರತಿಭಟಿಸಲು ಈ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು .
ಮೆರವಣಿಗೆ ಸಂಪೂರ್ಣ ಶಾಂತಿಯುತವಾಗಿತ್ತು . ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ ಎಂದು ಜಂಟಿ ಪೊಲೀಸ್ ಕಮೀಷನರ್ ಬಿ.ಎನ್. ನಾಗರಾಜ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications