ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ನಿಮಗಿವತ್ತು ಕಳ್ಳರ ಭಯವಿರುತ್ತದೆ. ಆಫೀಸಿನಲ್ಲಿ ನೀವು ಮಾಡಬೇಕಾದ ಕೆಲಸಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡು ಸಿಟ್ಟು ಮಾಡಿಕೊಳ್ಳಬೇಡಿ. ಯಾವ ಕೆಲಸವಾದರೇನು, ತಿಂಗಳ ಕೊನೆಗೆ ಯಾವುದೇ ವ್ಯತ್ಯಾಸವಿಲ್ಲ.
ಮಿಥುನ : ಮಾಡಿದ್ದನ್ನೇ ಮಾಡಿ ಕೆಲಸಗಳಲ್ಲಿ ನಿರಾಸಕ್ತಿ ಬಂದರೆ ಬೇಸರ ಬೇಡ. ಸಿಟ್ಟನ್ನೆಲ್ಲಾ ನುಂಗಿಕೊಂಡಲ್ಲಿ ಮತ್ತದೇ ಗೋಜಲಿನಲ್ಲಿರಬೇಕಾಗುತ್ತದೆ. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದು ನಿಮ್ಮ ತಾಳ್ಮೆಗೆ ಬಿಟ್ಟದ್ದು.
ಕಟಕ : ಮನೆಯಲ್ಲಿ ದೇವತಾ ಕಾರ್ಯ ನಡೆಸಬೇಕು ಅಂತ ಹಾಕಿಕೊಂಡಿರುವ ಪ್ಲಾನ್ಗಳು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿವೆ. ಅದಕ್ಕೆ ಮುನ್ನ ದಿನಕ್ಕೆ ಮೂವತ್ತಾರು ಗಂಟೆ ಕೊಟ್ಟರೂ ಮುಗಿಯದಷ್ಟು ಕೆಲಸಗಳು ರಾಶಿ ಬಿದ್ದಿವೆಯಲ್ಲಾ ?
ಸಿಂಹ : ಇವತ್ತು ನೀವು ಮಾತನಾಡಿದ್ದೇ ಮಾತು. ಎಲ್ಲರೂ ಬೆಪ್ಪಾಗುವಂತೆ ನಿಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸುತ್ತೀರಿ. ಧನಾಗಮವಾದೀತು. ಹಣವನ್ನು ಜೋಪಾನವಾಗಿಟ್ಟುಕೊಳ್ಳಬೇಕೆಂದಿದ್ದರೆ ಎಚ್ಚರದಿಂದಿರಬೇಕು.
ಕನ್ಯಾ : ನೌಕರಿಯಲ್ಲಿ ಬಡ್ತಿಯ ಸುದ್ದಿ ಬರಬಹುದು. ಮೂಗಿನ ತುದಿಯಲ್ಲಿಯೇ ಸಿಟ್ಟು ಇಟ್ಟುಕೊಂಡಲ್ಲಿ ಬರುವ ಭಾಗ್ಯ ಬಾಗಿಲಲ್ಲೇ ನಿಂತುಬಿಡುತ್ತದೆ. ಆದ್ದರಿಂದ ಈಗ ನಿಮ್ಮ ತಾಳ್ಮೆಗೇ ಪ್ರಾಶಸ್ತ್ಯ.
ತುಲಾ : ನಿಮ್ಮ ಹೆಂಡತಿಯ ತವರು ಮನೆಯಿಂದ ನೆಂಟರು ಬಂದರು ಅಂತ ಸಿಟ್ಟು ಬೇಡ. ಅವರಿಂದ ನಿಮಗೆ ಒಳ್ಳೆಯದಾಗಲಿದೆ. ಆದ್ದರಿಂದ ಯಾವತ್ತಿನ ಕೊಂಕು ಮಾತುಗಳನ್ನು ದೂರವಿಡಿ.
ವೃಶ್ಚಿಕ : ಆರ್ಥಿಕ ಮುಗ್ಗಟ್ಟು ನಿಮ್ಮ ಸ್ನೇಹಿತರಿಂದ ಪರಿಹಾರವಾಗುವುದು, ಸುಮ್ಮನೇ ಯಾಕೆ ಯೋಚನೆ ಮಾಡುತ್ತಿರಿ. ಆಫೀಸಿನ ಮಾಮೂಲಿ ತಕರಾರು ಬಿಟ್ಟರೆ ಎಲ್ಲವೂ ಚೆಂದವಾಗಿಯೇ ಇದೆ.
ಧನಸ್ಸು : ಲಾಟರಿ ಕೊಳ್ಳುವ ಅಭ್ಯಾಸವುಂಟಾ ? ಇವತ್ತು ಲಾಟರಿಯಿಂದ ಸೋಲಾಗುತ್ತದೆ. ಆದ್ದರಿಂದ ಆಫೀಸಿನಿಂದ ನೇರ ಮನೆಗೆ ಹೋಗುವುದು ಉತ್ತಮ. ಮನೆಯಲ್ಲಿ ಸಂತೋಷದ ವಾತಾವರಣ.
ಮಕರ : ನಿಮ್ಮ ಬಳಿ ಹಾಳು ಮಾಡುವುದಕ್ಕೆ ಅಂತ ಪ್ರತ್ಯೇಕ ಸಮಯವಿಲ್ಲ. ಸ್ನೇಹಿತರ ಮೇಲೆಲ್ಲಾ ಸಿಟ್ಟು ಮಾಡಿಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ.
ಕುಂಭ : ವೃಥಾ ಖರ್ಚು ಮಾಡುತ್ತಿದ್ದೀರಿ ಎಂದು ಗೊತ್ತಿದ್ದರೂ, ಅದನ್ನು ನಿಯಂತ್ರಿಸಲು ಹೆಣಗಾಡಬೇಕಾಗುತ್ತದೆ. ಇವತ್ತು ಒಳ್ಳೆಯ ಭೋಜನ ಭಾಗ್ಯವಿದೆ.
ಮೀನ : ಒಟ್ಟು ಹಿತಕ್ಕೆ ದುಡಿಯುವುದು ಎಂದರೆ ಏನು ಅಂತ ನಿಮಗೆ ಗೊತ್ತಿಲ್ಲ. ಆದ್ದರಿಂದ ಸಣ್ಣವರಾಗಿಬಿಡುತ್ತೀರಿ. ಸ್ನೇಹಿತರ ಮೂಲಕ ನಿಮಗೂ ಲಾಭವಾಗಬಹುದು.