ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿಕಿತ್ಸೆಯಲ್ಲಿ ಸಚಿನ್, ಅಗರ್ಕರ್ : ಮುಂಬೈ ಪರ ಆಡೋದಿಲ್ಲ
ಚೆನ್ನೈ : ಮೀನಖಂಡದ ನೋವಿನಿಂದ ಬಳಲುತ್ತಿರುವ ಸಚಿನ್ ಹಾಗೂ ಮೊಳಕಾಲು ನೋವಿಗೆ ತುತ್ತಾಗಿರುವ ಅಜಿತ್ ಅಗರ್ಕರ್ ಫೆಬ್ರವರಿ 22ರಿಂಗ 24ರವರೆಗೆ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿರುವ ಮುಂಬಯಿ ತಂಡದ ಪರ ಆಡುವುದಿಲ್ಲ.
ಭಾರತ ಕ್ರಿಕೆಟ್ ತಂಡದ ತರಪೇತುದಾರ ಜಾನ್ ರೈಟ್ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಮುಂಬಯಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮಾಸ್ಟರ್ ಬ್ಯಾಟ್ಸ್ಮನ್ ಸಚಿನ್ ಹಾಗೂ ವೇಗಿ ಅಜಿತ್ ಅಗರ್ಕರ್ ಕೊರತೆ ಎದ್ದು ಕಾಣಲಿದೆ. ಆದರೂ ಫೆಬ್ರವರಿ 28ರಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ದೃಷ್ಟಿಯಿಂದ ಈಗ ರಿಸ್ಕ್ ತೆಗೆದುಕೊಳ್ಳಲಾಗದು. ಇಬ್ಬರೂ ಆಟಗಾರರು ನೋವಿನ ಉಪಶಮನಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೈಟ್ ಹೇಳಿದರು.
(ಇನ್ಫೋ ವಾರ್ತೆ)
Comments
Story first published: Monday, February 19, 2001, 5:30 [IST]