ಬದುಕು ಕಟ್ಟಿ ಕೊಡುವ ಬಳೆ, ರಿಬ್ಬನ್ನು ...
ದಿನದಿಂದ ದಿನಕ್ಕೆ ಬಿಸಿಲು ಬಲಿಯುತ್ತಿದ್ದಂತೆ ಮಾಘದ ಕಳೆಗೂ ಏರುಮುಖ. ಬೆಂಗಳೂರಿನಲ್ಲೇ ನೋಡಿ. ಕಲ್ಯಾಣ ಮಂಟಪಗಳ ತುಂಬೆಲ್ಲಾ ಗಿಜಿಗಿಜಿ ಗಮಲು. ಬೆವರು ಬಸಿಯುವ ಹವೆಯ ನಡುವೆಯೂ ಭಾರದ ಜರಿ ಸೀರೆಗಳುಟ್ಟು ಸಂಭ್ರಮಿಸುತ್ತ ಧಾರೆಗೆ ಸಾಕ್ಷಿಯಾಗುವ ನೀರೆಯರು. ಇದೇ ಹೊತ್ತಿನಲ್ಲಿ ಹೊಸಿತಿಲಲ್ಲೇ ಇವೆ- ಶಿವರಾತ್ರಿ, ನಂತರದ ಹೆಜ್ಜೆಗೆ ಯುಗಾದಿ. ಈಗಾಗಲೇ, ಜಾಗರಣೆಯ ಸಿದ್ಧತೆಗಳೂ ನಡೆದಿವೆ. ಪಂದ್ಯ ಪೋಟಿಗಳು, ಸಂಗೀತೋತ್ಸವಗಳು, ಹರಿಕಥೆ.. ಏನೆಲ್ಲಾ . ಮನರಂಜನೆಯದೇ ಮೇಲುಗೈ.
ಅದೇ ಸಂಭ್ರಮ ಕರಾವಳಿಯಲ್ಲೂ . ಮೊನ್ನೆ ಪೊಳಲಿಯಲ್ಲಿ ನಡೆದ ರಾಜ ರಾಜೇಶ್ವರಿ ಅಮ್ಮನ ಬ್ರಹ್ಮ ಕಲಶೋತ್ಸವಕ್ಕೆ ಕಮ್ಮಿ ಅಂದರೆ ಅರವತ್ತು ಸಾವಿರ ಜನ ಕಲೆತಿದ್ದರು ಎಂದು ನಿಧಾನಗತಿಯಲ್ಲಿ ಸುದ್ದಿ ರವಾನಿಸಿರುವ ನಮ್ಮ ಮಂಗಳೂರು ಬಾತ್ಮೀದಾರರು ತಿಳಿಸಿದ್ದಾರೆ. ಮಂಗಳೂರಿನಿಂದ ಪೊಳಲಿಗೆ ಉಚಿತ ಬಸ್ಸು ವ್ಯವಸ್ಥೆಯೂ ಇತ್ತಂತೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಅಮ್ಮನಿಗೆ ಬೆಳ್ಳಿರಥ ಸಮರ್ಪಿಸಿ ಕೈ ಮುಗಿದರು.
ಬದುಕು ಯಾಕೆ ಸಂಭ್ರಮವನ್ನು ಬಯಸುತ್ತದೆ. ಗುಜರಾತಿನ ಭೂಕಂಪದಂಥಾ ದುರಂತ ಸಂಭವಿಸಿದಾಗ, ಎಲ್ಲಕ್ಕೂ ವಿಮುಖವಾಗುವ ಮನಸು, ಬಂಧುಸಮೂಹದ ನಡುವೆಯೂ ಒಂಟಿಯೆಂದು ರೋಧಿಸುವ ಮನಸು, ಪೊಳಲಿಯ ಉತ್ಸವದಲ್ಲಿ ಹಕ್ಕಿಯಾಗುತ್ತದೆ. ಅದೆಂಥಾ ಸೋಜಿಗ ಚಿತ್ತದ್ದು. ಕ್ಷಣಕ್ಕೊಮ್ಮೆ ನಿರಿಗೆ ಸರಿಪಡಿಸಿಕೊಳ್ಳುತ್ತ , ನಿಮಿಷಕ್ಕೊಮ್ಮೆ ಮುಗ್ಗರಿಸುವ ಪುಟ್ಟಿಯ ಹುಮ್ಮಸ್ಸಿನ ಗರ್ಭದಲ್ಲಿ ಇರುವುದಾದರೂ ಏನು? ಅವಳು ಅಮ್ಮನಲ್ಲಿ ಬೇಡಿಕೊಂಡದ್ದಾದರೂ ಏನು? ಎಸ್ಟೇಟು, ಕಾರು, ಬಂಗಲೆ, ನೆಮ್ಮದಿ, ಆರೋಗ್ಯ... ಬಳೆ, ರಿಬ್ಬನ್ನು.. ಏನಾದರೂ ಇರಬಹುದು, ಅವಳ ಪುಟ್ಟ ಹೃದಯದ ದೊಡ್ಡ ಜಗತ್ತಿನಲ್ಲಿ .
ಇಷ್ಟಕ್ಕೂ, ಬದುಕಿನ ಪ್ರತಿಯಾಂದು ಕ್ರಿಯೆಗೂ ಅರ್ಥ ಹೆಕ್ಕುತ್ತ ಹೋಗುವುದು ವೃಥಾ ಕಸರತ್ತು ಅನ್ನಿಸುತ್ತದೆ. ಶುಕ್ರವಾರ (ಸತತ ಎರಡನೆ ದಿನ) ರಾಜ್ಯದಲ್ಲಿ ಅತ್ಯಂತ ಕನಿಷ್ಠ ತಾಪಮಾನ(14 ಡಿ.ಸೆ) ಬೆಳಗಾವಿಯಲ್ಲೇಕೆ ದಾಖಲಾಗಿತ್ತು ಅನ್ನುವಂಥಾ ಪ್ರಶ್ನೆಯಾಗಲೀ, ಒಣಹವೆ ರಾಜ್ಯದಲ್ಲಿ ಈವತ್ತೂ ಯಾಕೆ ಮುಂದುವರಿದಿತ್ತು ಅನ್ನುವುದಾಗಲೀ, ನಾಳೆಯೂ ಒಣಹವೆಯಲ್ಲೆ ರಾಜ್ಯ ಬೇಯುವುದು ಅನಿವಾರ್ಯ ಅನ್ನುವುದಾಗಲೀ ಅಷ್ಟೊಂದು ಮುಖ್ಯವೆನ್ನಿಸುವುದಿಲ್ಲ . ಅದೆಲ್ಲಾ ಕಾಲನ ವ್ಯಾಪಾರ. ಋತು ವಿಲಾಸ. ಈ ನಡುವೆ, ಸಿಕ್ಕಿದ್ದನ್ನು ಹೆಕ್ಕಿಕೊಂಡು, ಸಣ್ಣ ಪುಟ್ಟ ಘಟನೆಗಳ ಮೂಲಕವೇ ಬದುಕನ್ನು ಕಟ್ಟಿಕೊಂಡು ಬದುಕುವುದು ಒಂದು ಸವಾಲಿನ ಕಲೆ. ಅದು ಎಲ್ಲರಿಗೂ ಸಿದ್ಧಿಸಲಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications