ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೇಡಿಕೆ ಈಡೇರಿಕೆಗೆ ಮಾನ್ವಿ ಅಕ್ಕಿ ಗಿರಣಿ ಕಾರ್ಮಿಕರ ಮುಷ್ಕರ
ರಾಯಚೂರು : ಮಾನ್ವಿ ಪಟ್ಟಣದ 12 ಅಕ್ಕಿ ಗಿರಣಿಗಳ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಆರಂಭಿಸಿದ್ದಾರೆ. ಅಕ್ಕಿ ಗಿರಣಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಮಾಲರು, ಕಾರ್ಮಿಕರು ಈ ಹಿಂದೆಯೇ ನಿರ್ಧರಿಸಿದ್ದಂತೆ ಹೋರಾಟದ ಹಾದಿ ತುಳಿದಿದ್ದಾರೆ.
ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಜಂಟಿ ಸಭೆಯಲ್ಲಿ ಈ ಹಿಂದೆಯೇ ಮುಷ್ಕರ ನಡೆಸುವ ಬಗ್ಗೆ ಕಾರ್ಮಿಕ ಮುಖಂಡರು ಪ್ರಕಟಿಸಿದ್ದರು. ಈ ವಿಷಯವನ್ನು ಶ್ರಮಿಕ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಚ್. ಮಾಸ್ತರ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ ಅಧಿಕಾರಿಗಳು ಬೇಡಿಕೆಗಳನ್ನು ಸೌಹಾರ್ದಯುತವಾಗಿ ಮಾತುಕತೆಗಳ ಮೂಲಕ ಬಗೆಹರಿಸಲು ಕರೆದಿದ್ದ ಸಭೆಗೆ ಗಿರಣಿ ಮಾಲಿಕರು ಗೈರುಹಾಜರಾದ ಹಿನ್ನೆಲೆಯಲ್ಲಿ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
Comments
Story first published: Tuesday, February 6, 2001, 0:00 [IST]