ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಎಸ್‌ಎಟಿಎಫ್‌ ಬಂಧಿಸಿರುವ ವ್ಯಕ್ತಿ ವೀರಪ್ಪನ್‌ ಸಹಚರನೆ ?

By Staff
|
Google Oneindia Kannada News

ಪುದುಪಾದೈ : ನರಹಂತಕ ವೀರಪ್ಪನ್‌ ಬೆನ್ನು ಬಿದ್ದಿರುವ ಕರ್ನಾಟಕ ವಿಶೇಷ ಪಡೆಯ ಪೊಲೀಸರು, ಶನಿವಾರ ರಾತ್ರಿ ತಮಿಳುನಾಡು- ಕೇರಳ ಗಡಿಯ ಪುದುಪಾದೈ ಅರಣ್ಯ ಪ್ರದೇಶದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಎಸ್‌ಟಿಎಫ್‌ ಬಂಧಿಸಿರುವ ವ್ಯಕ್ತಿ ವೀರಪ್ಪನ್‌ ಗುಂಪಿಗೆ ಸೇರಿದವನೇ ಅಲ್ಲವೇ ಅನ್ನುವ ವಿಷಯ ಈ ವರೆಗೆ ಸ್ಪಷ್ಟವಾಗಿಲ್ಲ . ಕೊಯಮತ್ತೂರು ಮೂಲಗಳು ತಿಳಿಸಿರುವಂತೆ- ಬಂಧಿತ ವ್ಯಕ್ತಿಗೂ ವೀರಪ್ಪನ್‌ಗೂ ಸಂಬಂಧವಿಲ್ಲ . ಆದರೆ, ಬಂಧಿತ ವ್ಯಕ್ತಿಯೂ ಓರ್ವ ಕಳ್ಳ ಸಾಗಾಣಿಕೆದಾರ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಉಭಯ ರಾಜ್ಯಗಳ ಎಸ್‌ಟಿಎಫ್‌ ಪಡೆಗಳು ಕೇರಳ- ತಮಿಳುನಾಡು ಗಡಿಭಾಗದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಸಾವಂತಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ಅವಿತುಕೊಂಡಿರುವುದಾಗಿ ಬಲವಾಗಿ ನಂಬಿರುವ ಪೊಲೀಸರು, ಕಾರ್ಯಾಚರಣೆಯಲ್ಲಿ ಮೂರು ಹೆಲಿಕ್ಯಾಪ್ಟರ್‌ಗಳ ಸಹಾಯವನ್ನೂ ಪಡೆದಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X