ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ಎಸ್ಎಟಿಎಫ್ ಬಂಧಿಸಿರುವ ವ್ಯಕ್ತಿ ವೀರಪ್ಪನ್ ಸಹಚರನೆ ?
ಪುದುಪಾದೈ : ನರಹಂತಕ ವೀರಪ್ಪನ್ ಬೆನ್ನು ಬಿದ್ದಿರುವ ಕರ್ನಾಟಕ ವಿಶೇಷ ಪಡೆಯ ಪೊಲೀಸರು, ಶನಿವಾರ ರಾತ್ರಿ ತಮಿಳುನಾಡು- ಕೇರಳ ಗಡಿಯ ಪುದುಪಾದೈ ಅರಣ್ಯ ಪ್ರದೇಶದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಎಸ್ಟಿಎಫ್ ಬಂಧಿಸಿರುವ ವ್ಯಕ್ತಿ ವೀರಪ್ಪನ್ ಗುಂಪಿಗೆ ಸೇರಿದವನೇ ಅಲ್ಲವೇ ಅನ್ನುವ ವಿಷಯ ಈ ವರೆಗೆ ಸ್ಪಷ್ಟವಾಗಿಲ್ಲ . ಕೊಯಮತ್ತೂರು ಮೂಲಗಳು ತಿಳಿಸಿರುವಂತೆ- ಬಂಧಿತ ವ್ಯಕ್ತಿಗೂ ವೀರಪ್ಪನ್ಗೂ ಸಂಬಂಧವಿಲ್ಲ . ಆದರೆ, ಬಂಧಿತ ವ್ಯಕ್ತಿಯೂ ಓರ್ವ ಕಳ್ಳ ಸಾಗಾಣಿಕೆದಾರ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಉಭಯ ರಾಜ್ಯಗಳ ಎಸ್ಟಿಎಫ್ ಪಡೆಗಳು ಕೇರಳ- ತಮಿಳುನಾಡು ಗಡಿಭಾಗದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಸಾವಂತಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಅವಿತುಕೊಂಡಿರುವುದಾಗಿ ಬಲವಾಗಿ ನಂಬಿರುವ ಪೊಲೀಸರು, ಕಾರ್ಯಾಚರಣೆಯಲ್ಲಿ ಮೂರು ಹೆಲಿಕ್ಯಾಪ್ಟರ್ಗಳ ಸಹಾಯವನ್ನೂ ಪಡೆದಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ
Comments
Story first published: Sunday, February 4, 2001, 5:30 [IST]