ಏರ್- ಇಂಡಿಯಾ 2001, ‘ಹಕ್ಕಿ’ ಹಾರುತಿದೆ ನೋಡಿದಿರಾ !
ಬೆಂಗಳೂರು : ಕಾಮನಬಿಲ್ಲಿನ ಕ್ಯಾನ್ವಾಸ್ ಮೇಲೆ ಹೊಗೆಗಳ ರೇಖಾ ಚಿತ್ರ. ಕಣ್ಣರೆಪ್ಪೆ ಯ ಒಂದೊಂದು ಹೊಡೆತಕ್ಕೂ ಬಾನೆತ್ತರ ಹಾರುತ್ತಾ ಸಣ್ಣಗಾಗುವ ಬಣ್ಣದ ‘ಪುಟ್ಟ ಹಕ್ಕಿ’ಗಳೇ ಪೆನ್ಸಿಲ್ಗಳು. ಹಕ್ಕಿಗಳೆಂದರೆ ಜೀವ ತುಂಬಿಕೊಂಡಿರುವವಲ್ಲ ; ಗ್ಯಾಸೋಲಿನ್ ತುಂಬಿಕೊಂಡವು. ಫೆಬ್ರವರಿ 7ರಿಂದ ಪ್ರಾರಂಭವಾಗಲಿರುವ ಏರೋ ಇಂಡಿಯಾ- 2001ರ ಮುನ್ನಾ ತಾಲೀಮು, 3 ದಿನಗಳ ಕಾಲದ ಏರ್ ಇಂಡಿಯಾ- 2001 ಭಾನುವಾರ ಶುರುವಾದದ್ದು ಹೀಗೆ.
ರಾಜ್ಯಪಾಲೆ ವಿ.ಎಸ್.ರಮಾದೇವಿ ಹಗುರ ವಿಮಾನಗಳ ಈ ರಂಗುರಂಗಿನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು. 4 ಸೆಸ್ನ, ಒಂದು ಎಚ್ಪಿಟಿ- 32, ಕ್ಸೆನ್ ಏರ್, ಹಂಸ- 3 ಮೊದಲಾದ ಹಗುರ ಚೆಲುವ ಚೆಲುವೆಯರು ನಭ ಶೋಧಿಸಲು ಹಾರಿದವು. ಇನ್ನು 3 ದಿನಗಳ ಬಳಿಕ, ಅಂದರೆ ಫೆಬ್ರವರಿ 6ನೇ ತಾರೀಖು ಇವು ಸ್ವಸ್ಥಾನಕ್ಕೆ ಮರಳುವ ಮುನ್ನ 850 ನಭೋ ಮೈಲಿಗಳನ್ನು ಸುತ್ತಲಿವೆ. ಇವುಗಳ ಮೇಲ್ವಿಚಾರಕನಾಗಿ ಚೇತಕ್ ಹೆಲಿಕಾಫ್ಟರ್ ಕೂಡ ಹಾರಿದೆ.
ಎರಡೂವರೆ ಸಾವಿರ ಕಿಲೋಗಿಂತಲೂ ಕಡಿಮೆ ತೂಕದ ಹಗುರ ವಿಮಾನಗಳ ಈ ತಾಲೀಮಿಗೆ ಗೋವಾ ಹಾಗೂ ಬೀದರ್ಗಳು ಜಂಕ್ಷನ್ಗಳಾಗಲಿವೆ. ರಾತ್ರಿ ಹೊತ್ತು ಈ ಬಣ್ಣದ ಸುಂದರ ಸುಂದರಿಯರಿಗೆ ರೆಸ್ಟು. ಅಗತ್ಯ ಬಿದ್ದಾಗ ಇಂಧನ ತುಂಬಿಸುವ ಮಾರ್ಷಲ್ ಆಗಿ ಚೇತಕ್ ಜೊತೆಗಿದ್ದೇ ಇರುತ್ತದೆ. ಫೆಬ್ರವರಿ 7ರಿಂದ ಪ್ರಾರಂಭವಾಗುವ ಏರೋ ಇಂಡಿಯಾ- 2001ರ ಕರ್ಟನ್ ರೈಸರ್ರೇ ಇಷ್ಟೊಂದು ಸೊಗಸಾಗಿದೆ.
ಐಟಿ ಹಿಂದೋಡದೆ ಏವಿಯೇಷನ್ಗೂ ಬನ್ನಿ : ಹಗುರ ವಿಮಾನಗಳ ಹಾರಾಟಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ರಾಜ್ಯಪಾಲರು ಒಂದು ಹಿಡಿ ಸಲಹೆ ಕೊಟ್ಟರು-
1. ವ್ಯವಸಾಯದಲ್ಲಿ ವಿಮಾನ ಬಳಸಿಕೊಂಡು ಮುಂದೆ ಬರಲು ಸಾಧ್ಯವಿದೆ.
2. ಬರೇ ಮಾಹಿತಿ ತಂತ್ರಜ್ಞಾನದ ಹಿಂದೆ ಓಡೋದು ಬಿಟ್ಟು ವೈಮಾನಿಕ ಕ್ಷೇತ್ರಕ್ಕೂ ಸೇರಬೇಕು.
3. ವಿಮಾನ ಯಾನದ ನಿಗದಿತ ಸಮಯದಲ್ಲಿ ಏರು ಪೇರಾಗೋದನ್ನ ತಡೆಯಬೇಕು. ತುಟ್ಟಿಯಾಗಿರುವ ವಿಮಾನ ಯಾನ ದರವನ್ನ ಅಗ್ಗವಾಗಿಸಿ, ಸಾಮಾನ್ಯನೂ ವಿಮಾನ ಹತ್ತುವಂತೆ ಮಾಡಬೇಕು.
ಇವೆಲ್ಲಾ ನಮ್ಮ ಆಸ್ತಿ : ಅಂದಿನ ಪುಷ್ಪಕ್ನಿಂದ ಇಂದಿನ ಎಲ್ಸಿಎವರೆಗೆ ದೇಶ ಕಂಡುಹಿಡಿರುವ ವಿಮಾನಗಳು ನಮ್ಮ ಆಸ್ತಿ. ಸಂಶೋಧನೆ ಮತ್ತು ಅಭಿವೃದ್ಧಿ ಕೇತ್ರದಲ್ಲಿ ನಮ್ಮ ದೇಶದ ಪ್ರಗತಿಗೆ ಕನ್ನಡಿ ಹಿಡಿದಿವೆ ಈ ಶೋಧನೆಗಳು. ಯುವಕರು ಈ ಕ್ಷೇತ್ರದ ಬಗ್ಗೆ ಒಲವು ಬೆಳೆಸಿಕೊಂಡು ಮುಂದೆ ಬರಬೇಕು. ಇ್ಲಲಿ ಭವಿಷ್ಯವಿದೆ. ದೇಶದ ವಿವಿಧೆಡೆಗಳಲ್ಲಿ ಇಂಥ ರೇಸ್ಗಳನ್ನು ಆಯೋಜಿಸಲು ಎಚ್ಎಎಲ್ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಥಳೀಯ ಹಾರಾಟದ ಕ್ಲಬ್ಬುಗಳೊಡನೆ ಒಡಂಬಡಿಕೆಗೆ ಸಂಸ್ಥೆ ಸಹಿ ಹಾಕಲಿದೆ ಎಂದು ಎಚ್ಎಎಲ್ ಅಧ್ಯಕ್ಷ ಡಾ. ಸಿ.ಜಿ. ಕೃಷ್ಣದಾಸ್ ಹೇಳಿದರು.
2003ಕ್ಕಾಗಿ ಈ ತಾಲೀಮು : ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಏರ್ ಮಾರ್ಷಲ್ ಪಿ.ರಾಜ್ಕುಮಾರ್ ಮಾತನಾಡುತ್ತಾ, ಮಾನವ ಗಗನಕ್ಕೆ ವಿಮಾನ ಹಾರಿಸಿದ 100 ವರ್ಷದ ಆಚರಣೆಯ ಸಂದರ್ಭ- 2003ರಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಿಮಾನ ರೇಸಿಗೆ ಇಂಥ ಹಾರಾಟಗಳು ಅಭ್ಯಾಸಕ್ಕೆ ಅವಕಾಶ ಮಾಡಿಕೊಡುತ್ತವೆ. ಪೈಲಟ್ಗಳ ಒಟ್ಟಾರೆ ಸಾಮರ್ಥ್ಯ ಬಹುಮಾನದ ಮಾನದಂಡವಾಗಿರುತ್ತದೆ. ಕೇವಲ ವಿಮಾನಗಳ ವೇಗವಷ್ಟೇ ಅಲ್ಲ ಎಂದರು.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications