ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಮನಸ್ಸಿದ್ದರೆ ತಾನೆ ಮಾರ್ಗ, ಗ್ರಹಗತಿಗಳೂ ಅನುಕೂಲಕರವಾಗಿವೆ. ಮನೆ, ಸೈಟು ಕೊಂಡರೆ ಲಾಭ. ಅನ್ಯರನ್ನು ಮೆಚ್ಚಿಸುವ ಹರ ಸಾಹಸ ಬೇಡ.
ಮಿಥುನ : ಹೊಸ ಒಡಂಬಡಿಕೆಯ ಕಡೆ ಮನ ಮಿಡಿಯುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ. ಅಪಾಯದ ಭೀತಿ ಇದೆ. ಪ್ರೇಮಿಗಳಿಗೆ ಶುಭ ದಿನ.
ಕಟಕ : ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕುತ್ತದೆ. ಇಂದು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರಂತೂ ಬಡ್ತಿ, ಪ್ರಶಸ್ತಿ ಎರಡೂ ನಿಮ್ಮದೆ.
ಸಿಂಹ : ಜೀವನದ ಜಂಜಾಟದಿಂದ ಬೇಸತ್ತಿದ್ದೀರಿ. ಇರುಳ ನಂತರ ಹಗಲು ಬಂದೇ ಬರುತ್ತದೆ. ನಿಮ್ಮ ಬದುಕಲ್ಲೂ ಅಷ್ಟೇ. ಸುಖ ಬರುವ ಕಾಲ ಇದು.
ಕನ್ಯಾ : ಎಲ್ಲ ಇದೆ. ಮನಸ್ಸಿಗೆ ನೆಮ್ಮದಿ ಇಲ್ಲ. ಆರೋಗ್ಯವೂ ಕೈಕೊಟ್ಟಿದೆ. ಬಂಡೆ ಗುದ್ದಿ ನೀರು ತೆಗೆವ ಸಾಹಸ ಬೇಡ.
ತುಲಾ : ಕೀರ್ತಿ - ಅಪಕೀರ್ತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಬೈಗುಳದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.
ವೃಶ್ಚಿಕ : ಎಲ್ಲ ನೀವು ಅಂದುಕೊಂಡತೇ ಆಗುತ್ತದೆ ಎನ್ನುವ ಭ್ರಮೆ ಬೇಡ. ಇಂದಂತೂ ನಿಮಗೆ ಎಲ್ಲ ವ್ಯತಿರಿಕ್ತವಾಗಿದೆ. ಕುಲದೇವರನ್ನು ನಂಬಿದರೆ, ಸಂಕಷ್ಟ ಪರಿಹಾರ.
ಧನಸ್ಸು : ಆಫೀಸ್ನಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಬಡ್ತಿಯೂ ಸಿಗುತ್ತದೆ. ಆದರೆ, ಕೊಂಚ ಕಾಯಬೇಕಷ್ಟೇ. ಇಂದಿನ ಶ್ರಮಕ್ಕೆ ನಾಳೆ ಪ್ರತಿಫಲ.
ಮಕರ : ಕೈಕೆಸರಾದರೇ ಬಾಯಿ ಮೊಸರಾಗುವುದು. ನಿಮ್ಮ ಅವಿರತ ಶ್ರಮಕ್ಕೆ ಪ್ರತಿಫಲ ದೊರಕುತ್ತದೆ. ಜನಮೆಚ್ಚುಗೆಗೆ ಪಾತ್ರರಾಗುತ್ತೀರಿ.
ಕುಂಭ : ಅನಾರೋಗ್ಯದ್ದೇ ನಿಮಗೆ ಚಿಂತೆ. ಆಪ್ತರ ಸಲಹೆಯಿಂದ ಶುಭ. ಅನಿರೀಕ್ಷಿತ ಅತಿಥಿಯ ಆಗಮನದಿಂದ ಚಿಂತೆ ದೂರ.
ಮೀನ : ಹೊಸ ವಿಷಯಗಳ ಬಗ್ಗೆ ಚಿಂತಿಸಿ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಅಗತ್ಯ ಇಲ್ಲ. ಶ್ರದ್ಧೆ ಇದ್ದ ಕಡೆ ಜಯ ಇದ್ದೇ ಇದೆ.