ಗಂಗೆಯ ತಡಿಯಲ್ಲಿ ಬೆತ್ತಲಾದ ಮಹಿಳೆಯರಿಗೆ ಪೊಲೀಸರಿಂದ ಅಡ್ಡಿ
ಕುಂಭ ನಗರ : ಸಂಪೂರ್ಣ ಬೆತ್ತಲಾದ ಇಬ್ಬರು ಮಹಿಳೆಯರು ಪವಿತ್ರ ಸಂಗಮದ ಗಂಗೆಯಲ್ಲಿ ಸ್ನಾನ ಮಾಡಲು ಪ್ರಯತ್ನಿಸಿದಾಗ ತಕ್ಷಣವೇ ಕಾಯೋನ್ಮುಖರಾದ ಮಹಿಳಾ ಪೊಲೀಸರು ಬೆತ್ತಲೆ ಸ್ತ್ರೀಯರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆತ್ತಲೆಯಾಗಿ ನೀರಿಗಿಳಿಯುತ್ತಿದ್ದ ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ಆನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಬೆತ್ತಲೆಯಾಗಿ ಸ್ನಾನ ಮಾಡಲು ತಮಗೆ ಅವಕಾಶ ನೀಡದಿರುವ ಪೊಲೀಸರ ಕ್ರಮವನ್ನು ಪ್ರತಿಭಟಿಸಿರುವ ಈ ಮಹಿಳೆಯರು, ನಾಗಾ ಸಾಧುಗಳು ಬೆತ್ತಲೆಯಾಗಿ ಸ್ನಾನ ಮಾಡುವಾಗ ತಮಗೆ ಏಕೆ ಅವಕಾಶ ದೊರೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕುಂಭಮೇಳಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು , ಈವರೆಗೆ ಸುಮಾರು 30 ಲಕ್ಷಕ್ಕಿಂತಾ ಹೆಚ್ಚು ಭಕ್ತಾದಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವರೆಂದು ಸ್ಥಳೀಯ ಆಡಳಿತದ ಪ್ರಕಟಣೆ ತಿಳಿಸಿದೆ. ಜನ ಸಾಮಾನ್ಯರು, ಸಾಧು ಸಂತರು, ಯಾತ್ರಿಗಳು ಮಾತ್ರವಲ್ಲದೆ ಅನೇಕ ವಿಜ್ಞಾನಿಗಳು, ಸಾಹಿತಿಗಳು, ವಿಚಾರವಾದಿಗಳು ಕೂಡ ಪವಿತ್ರ ಸ್ನಾನದ ಸರತಿಯಲ್ಲಿದ್ದಾರೆ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...