Get Updates
Get notified of breaking news, exclusive insights, and must-see stories!

ವರ್ಷವಿಡೀ ಹೆಣಗಾಡಿದ ಕೃಷ್ಣ ಸಪತ್ನೀಕರಾಗಿ ರಜಾ ಪ್ರವಾಸ

ಬೆಂಗಳೂರು : ರಾಜ್‌ಕುಮಾರ್‌ ಅಪಹರಣವಾದ ದಿನದಿಂದಲೂ ನಿದ್ದೆಗೆಟ್ಟು , ಶಾಂತಿ ಸುವ್ಯವಸ್ಥೆಗೆ ಭಂಗ ಬರದಂತೆ ಆಡಳಿತ ಯಂತ್ರವನ್ನು ನಿರ್ವಹಿಸಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು, ವಿಶ್ರಾಂತಿ ಪಡೆಯಲೋಸುಗ ಹಾಂಕಾಂಗ್‌, ಬ್ಯಾಂಕಾಕ್‌ನತ್ತ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸುತ್ತಿದ್ದಾರೆ.

ಸಕುಟುಂಬ ಪರಿವಾರ ಸಮೇತರಾಗಿ ಹಾಂಕಾಂಗ್‌, ಬ್ಯಾಂಕಾಕ್‌ನತ್ತ ತೆರಳುತ್ತಿರುವ ಕೃಷ್ಣ ಅವರೊಂದಿಗೆ, ಅವರ ಪತ್ನಿ ಪ್ರೇಮಾ ಕೃಷ್ಣ ಹಾಗೂ ಮಗಳು - ಅಳಿಯ ಸಹ ವಿಮಾನ ಏರಲಿದ್ದಾರೆ. ಈ ವರ್ಷದ ಕೊನೆಯ ಎರಡು ದಿನಗಳನ್ನು ಹಾಗೂ ಹೊಸ ವರ್ಷದ ಮೊದಲ ಮೂರು ದಿನಗಳನ್ನು ಸಂಪೂರ್ಣ ಖಾಸಗಿಯಾಗಿ ಕುಟುಂಬದ ಸದಸ್ಯರೊಂದಿಗೆ ಕಳೆಯಲಿಚ್ಛಿಸಿರುವ ಮುಖ್ಯಮಂತ್ರಿಗಳು 2000 ಉರುಳಿ, 2001 ಬೆಳಗಾಗುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಇರುವುದಿಲ್ಲ.

ಈ ಮುನ್ನ ವಿಶ್ರಾಂತಿಗಾಗಿ ಕೃಷ್ಣ ಅವರು ದುಬೈ ಹಾಗೂ ಅಮೆರಿಕಕ್ಕೆ ಹೋಗುತ್ತಾರೆ ಎಂಬ ವದಂತಿಗಳಿದ್ದವು. 2 ದಿನ ಖಾಸಗಿಯಾಗಿ ಕಳೆಯುವ ಅವರು, ರಾಜ್ಯಕ್ಕೆ ವಿದೇಶೀ ಬಂಡವಾಳ ಆಕರ್ಷಿಸುವ ಸಲುವಾಗಿ ವಾಣಿಜ್ಯೋದ್ಯಮಿಗಳೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವೂ ಇದೆ ಎಂಬ ಊಹಾಪೋಹಗಳಿದ್ದವು. ಅಮೆರಿಕದಲ್ಲಿ ವಿಪರೀತ ಚಳಿ ಇರುವ ಕಾರಣ ಕೃಷ್ಣ , ಅಮೆರಿಕ ಪ್ರವಾಸವನ್ನು ರದ್ದು ಪಡಿಸಿದರು ಎಂದೂ ಹೇಳಲಾಗಿತ್ತು.

ಈಗಷ್ಟೇ ವಿಶ್ವಸನೀಯ ಮೂಲಗಳಿಂದ ಸಿಕ್ಕ ನಿಖರ ಮಾಹಿತಿಯ ರೀತ್ಯ ಎಲ್ಲ ಊಹಾಪೋಹಗಳಿಗೂ ಪೂರ್ಣ ವಿರಾಮ ಹೇಳುವಂತೆ ಮುಖ್ಯಮಂತ್ರಿಗಳು ಕುಟುಂಬದ ಸದಸ್ಯರೊಂದಿಗೆ ಶುಕ್ರವಾರ ರಾತ್ರಿ 8ಕ್ಕೆ ಚೆನ್ನೈಗೆ ತೆರಳಿ ಅಲ್ಲಿಂದ ಹಾಂಕಾಂಗ್‌, ಬ್ಯಾಂಕಾಕ್‌ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಜನವರಿ 3ರಂದು ನಗರಕ್ಕೆ ವಾಪಸಾಗುತ್ತಿದ್ದಾರೆ.

( ನಮ್ಮ ಪ್ರತಿನಿಧಿಯಿಂದ )

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+