ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗದ ಮೇಲೆ ಶಂಕರ್‌ನಾಗ್‌ ಸ್ಮರಣೆ : ಡಿ.29 ರಿಂದ ರಂಗಶಂಕರ

By Staff
|
Google Oneindia Kannada News

ಬೆಂಗಳೂರು : ಎರಡು ಹಂತಗಳಲ್ಲಿ ದಿವಂಗತ ಶಂಕರನಾಗ್‌ ನೆನಪಿನ ರಂಗಶಂಕರ ನಾಟಕೋತ್ಸವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಸಂಕೇತ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಅರುಂಧತಿ ನಾಗ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಡಿಸೆಂಬರ್‌ 29ರಂದು 14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಉಳಿದ 13 ಜಿಲ್ಲಾ ಕೇಂದ್ರಗಳಲ್ಲಿ ಜನವರಿ 21ರಂದು ನಾಟಕೋತ್ಸವ ನಡೆಯುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅರುಂಧತಿ ನಾಗ್‌ ತಿಳಿಸಿದರು. ಶಂಕರನಾಗ್‌ ಜನ್ಮದಿನವಾದ ನವಂಬರ್‌ 9 ರಂದೇ ನಾಟಕೋತ್ಸವ ನಡೆಯಬೇಕಿದ್ದರೂ, ರಾಜ್‌ ಅಪಹರಣದ ಪ್ರಯುಕ್ತ ಉತ್ಸವವನ್ನು ಮುಂದೂಡಲಾಗಿತ್ತು ಎಂದರು.

ಯುವ ಪ್ರತಿಭೆಗಳು ಹಾಗೂ ಗ್ರಾಮೀಣ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ರಂಗೋತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹೆಸರಾಂತ ಹಾಗೂ ಅನುಭವಿ ರಂಗ ತಂಡಗಳೊಂದಿಗೆ ಉದಯೋನ್ಮುಖ ತಂಡಗಳು, ನಾಟಕಕಾರರು ಪಾಲ್ಗೊಳ್ಳುತ್ತಿರುವುದು ಉತ್ಸವದ ವಿಶೇಷವಾಗಿದೆ. ಉತ್ಸವದ ಎಲ್ಲಾ ನಾಟಕಗಳನ್ನು ಅನಿಕೇತನ ಟ್ರಸ್ಟ್‌ ಪ್ರಾಯೋಜಿಸುತ್ತಿದೆ ಎಂದು ಅರುಂಧತಿ ತಿಳಿಸಿದರು.

(ಇನ್ಪೊ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X