Get Updates
Get notified of breaking news, exclusive insights, and must-see stories!

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್‌ ಪತ್ತೆ : ಐಎಸ್‌ಐ ಕೈವಾಡದ ಶಂಕೆ

ಬೆಂಗಳೂರು : ಮೀರಜ್‌ಗೆ ನಗರದಿಂದ ಭಾನುವಾರ ರಾತ್ರಿ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟೈಂ ಬಾಂಬ್‌ ಪತ್ತೆಯಾಗಿದ್ದು , ಈ ದಾರಿಯಲ್ಲಿ ರೈಲು ಸಂಚಾರವನ್ನು ಸ್ವಲ್ಪ ಹೊತ್ತು ತಡೆಯ ಹಿಡಿಯಲಾಗಿತ್ತು.

ಇದೇ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಭಾರೀ ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌ ಮತ್ತು ಮಾಜಿ ಮುಖ್ಯ ಮಂತ್ರಿ ಎಸ್‌. ಬಂಗಾರಪ್ಪ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ರುವ ಟೈಂಬಾಬ್‌ ಎನ್ನಲಾಗಿರುವ ರೇಡಿಯಂನಂತಹ ವಸ್ತುವಿನ ಬಳಿ ಗಡಿಯಾರದಂತಹ ವಸ್ತುವೊಂದು ಪತ್ತೆಯಾಗಿದ್ದು ಅದು ಟಿಕ್‌ ಟಿಕ್‌ ಶಬ್ದ ಮಾಡುತ್ತಿತ್ತು. ಅದನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಟಿ. ಮಡಿಯಾಳ್‌ ಹೇಳಿದರು.

ಚಲಿಸುತ್ತಿದ್ದ ಎಸ್‌-1 ಬೋಗಿಯಲ್ಲಿ ಪೊಲೀಸ್‌ ಪೇದೆ ವೆಂಕಟೇಶ್‌ ಎಂಬವರು ಶೌಚಾಲಯದಲ್ಲಿ ಮಿಂಚುವ ವಸ್ತುವನ್ನು ಕಂಡು ಬೊಬ್ಬೆ ಹಾಕಿದಾಗ ಮಲ್ಲೇಶ್ವರಂ ಬಳಿ ರೈಲಿನ ಚೈನು ಎಳೆದು ನಿಲ್ಲಿಸಲಾಯಿತು. ಕೂಡಲೇ ರೈಲು ನಿಲ್ಲಿಸಿ ಶ್ವಾನದಳದವರು ಮತ್ತು ಬಾಂಬ್‌ ಪತ್ತೆ ದಳದವರು ಬಾಂಬ್‌ನ್ನು ಪತ್ತೆ ಹಚ್ಚಿದರು. ಬಾಂಬ್‌ ಇರುವ ಬೋಗಿಯನ್ನು ದೂರಕ್ಕೆ ಕೊಂಡೊಯ್ದು ತಪಾಸಣೆ ನಡೆಸಿ, ರಾತ್ರಿ 11.15ಕ್ಕೆ ರೈಲು ಹೊರಡಲು ಸಿದ್ಧವಾಯಿತು.

ಕೇಂದ್ರ ಗೃಹ ಸಚಿವ ಎಲ್‌. ಕೆ. ಅಡ್ವಾಣಿ ನಗರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ರೈಲಿನಲ್ಲಿ ಬಾಂಬ್‌ ಇರುವ ಘಟನೆ ನಡೆದಿರುವುದರಿಂದ ಈ ಘಟನೆಯ ಹಿಂದೆ ಪಾಕಿಸ್ಥಾನದ ಐಎಸ್‌ಐನ ಕೈವಾಡ ಇರಬಹುದು ಎಂಬ ಶಂಕೆಯಿದೆ. ಘಟನೆ ನಡೆದ ಸ್ಥಳಕ್ಕೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್‌ ಮತ್ತು ನಗರ ಪೊಲೀಸ್‌ ಕಮಿಷನರ್‌ ಟಿ. ಮಡಿಯಾಳ್‌ ಭೇಟಿ ನೀಡಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+