ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿರಿಯಾಪಟ್ಟಣದ ಸುತ್ತೂರು ಮಠದಲ್ಲಿ ಜಗದ್ಗುರುಗಳ 1041ನೇ ಜಯಂತಿ

By Staff
|
Google Oneindia Kannada News

ಮೈಸೂರು : ಪಿರಿಯಾಪಟ್ಟಣದ ಶ್ರೀ ಸುತ್ತೂರು ಮಠದಲ್ಲಿ ಡಿಸೆಂಬರ್‌ 23ರಿಂದ 30ರವರೆಗೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಸ್ವಾಮಿಗಳ 1041ನೇ ಜಯಂತಿ ಸಮಾರಂಭ ವೈಭವದಿಂದ ಜರುಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ.

ಈ ಬಾರಿಯ ವಾರ್ಷಿಕ ಜಯಂತಿಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವರುಗಳಾದ ಎಲ್‌.ಕೆ. ಆಡ್ವಾಣಿ, ಅನಂತಕುಮಾರ್‌, ಜಾರ್ಜ್‌ ಫರ್ನಾಂಡಿಸ್‌, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ವರನಟ ಡಾ. ರಾಜ್‌ಕುಮಾರ್‌, ಟಿಬೆಟಿಯನ್‌ ಧರ್ಮಗುರು ದಲೈಲಾಮಾ ಹಾಗೂ ಇನ್ನಿತರ ಗಣ್ಯರು ಆಗಮಿಸುತ್ತಿದ್ದಾರೆ.

ಶುಕ್ರವಾರ ಈ ವಿಷಯವನ್ನು ಬಿ.ಜೆ.ಪಿಯ ಶಾಸಕ ಎಚ್‌.ಸಿ. ಬಸವರಾಜು ಹಾಗೂ ಸುತ್ತೂರು ಮಠದ ವಕ್ತಾರರಾದ ಎಚ್‌. ಗಂಗಾಧರ್‌ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

24ರಂದು ಅಡ್ವಾಣಿ ನಗರಕ್ಕೆ : ಸುತ್ತೂರು ಮಠದಲ್ಲಿ ನಡೆಯಲಿರುವ ಭಗವತ್ಪಾದರ ಜಯಂತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೃಹ ಸಚಿವ ಎಲ್‌.ಕೆ. ಆಡ್ವಾಣಿ ಅವರು 24ರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೊದಲು ಅವರು ಪಂಡಿತ್‌ ರವಿಶಂಕರ್‌ ಅವರನ್ನು ಭೇಟಿ ಮಾಡಿ, ಆನಂತರ ಹೆಲಿಕಾಪ್ಟರ್‌ನಲ್ಲಿ ಕೆ.ಆರ್‌. ನಗರಕ್ಕೆ ತೆರಳಿ, ಅಲ್ಲಿಂದ ಕಾರಿನಲ್ಲಿ ಪಿರಿಯಾಪಟ್ಟಣಕ್ಕೆ ಹೋಗುತ್ತಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X