ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಂಧಿ,ಅಂಬೇಡ್ಕರ್ ಸಾಲಿಗೆ ಬಸವ : ಚಿಂಚೋಳಿಯಲ್ಲಿ ವಿಗ್ರಹಕ್ಕೆ ಅವಮಾನ
ಭಾಲ್ಕಿ : ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಬಸವೇಶ್ವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ, ಅದರ ಮೇಲೆ ಎ.ಕೆ. 47 ಎಂದು ಬರೆದ ಕಾರಣ ಬುಧವಾರ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು.
ಬುಧವಾರ ಬೆಳಗಿನ ಜಾವ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬಸವೇಶ್ವರ ಪ್ರತಿಮೆಗೆ ದುಷ್ಕರ್ಮಿಗಳು ಅವಮಾನ ಮಾಡಿರುವುದು ಬಸವಾನುಯಾಯಿಗಳ ಗಮನಕ್ಕೆ ಬಂದ ತಕ್ಷಣ ದೊಡ್ಡ ಗುಂಪು ಜಮಾಯಿಸಿತು. ಎಲ್ಲಾ ಅಂಗಡಿಗಳು ಕದ ಮುಚ್ಚಿದವು. ಬಸವೇಶ್ವರ ವೃತ್ತದ ಹತ್ತಿರದ ಮನೆಯಾಂದರ ಮೇಲೆ ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿತು. ಪರಿಣಾಮ ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ತಲೆದೋರಿತು.
ಗ್ರಾಮದ ಕೆಲವು ಮುಖ್ಯಸ್ಥರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಇಂಥ ಹೇಯ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಬಸವಣ್ಣನವರ ಹೊಸ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]