ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂ.ಎಸ್. ಸುಬ್ಬುಲಕ್ಷ್ಮಿಗೆ ನಾರಾಯಣಸ್ವಾಮಿ ಸ್ಮಾರಕ ಸಂಗೀತ ಪ್ರಶಸ್ತಿ
ಬೆಂಗಳೂರು : ಪ್ರಸಿದ್ಧ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ಎಸ್.ವಿ. ನಾರಾಯಣಸ್ವಾಮಿ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು , ಡಿ.21 ರಂದು ಚೆನ್ನೈನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು.
ಐವತ್ತು ಸಾವಿರ ರುಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ನಗರದ ಚಾಮರಾಜಪೇಟೆ ಬಡಾವಣೆಯಲ್ಲಿರುವ ರಾಮಸೇವಾ ಮಂಡಳಿ ತನ್ನ ಸಂಸ್ಥಾಪಕರ ಹೆಸರಿನಲ್ಲಿ ನೀಡುತ್ತಿದೆ ಎಂದು ಮಂಡಳಿಯ ವ್ಯವಸ್ಥಾಪಕ ಟ್ರಸ್ಟಿ ರಾಮಪ್ರಸಾದ್ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೇಳು ದಶಕಗಳಿಂದ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಸುಬ್ಬುಲಕ್ಷ್ಮಿಯವರದು ಪಾಂಡಿತ್ಯ ಹಾಗೂ ಸಿರಿಕಂಠ ಮೇಳವಿಸಿದ ದಿವ್ಯಗಾಯನ. ಅವರು ಕರ್ನಾಟಕ ಸಂಗೀತದ ಅಧಿದೇವತೆ ಎಂದು ಪ್ರಕಟಣೆ ಬಣ್ಣಿಸಿದೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]