ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಗೆಳೆಯರೊಂದಿಗೆ ಹೊಸ ಆಲೋಚನೆಗಳ ಲೆಕ್ಕಾಚಾರ. ಅವು ಖಂಡಿತ ಯಶಸ್ವಿಯಾಗುತ್ತವೆ. ಮುಂದುವರೆಯಿರಿ. ಪ್ರವಾಸದ ಟೈಂ ಟೇಬಲ್ ಗೊತ್ತುಪಡಿಸುತ್ತಿದ್ದೀರಲ್ಲವೇ? ನಿಮ್ಮದು ಸರಿಯಾದ ಹೆಜ್ಜೆ.ವೃಷಭ : ಚಿಂತೆ. ಪದೇ ಪದೇ ಅವುಗಳದೇ ಮೆಲುಕು. ನಿಮ್ಮ ಬುದ್ಧಿಮತ್ತೆ ಬಗೆಗೆ ನಿಮಗಿರುವ ಆತ್ಮವಿಶ್ವಾಸಕ್ಕೆ ಕೊಂಚ ಕೊಡಲಿ ಪೆಟ್ಟು. ಗುಂಪೊಂದರಲ್ಲಿ ಇವತ್ತು ನೀವೇ ಕೇಂದ್ರ ಬಿಂದು.
ಮಿಥುನ : ಹೇಳಿದ್ದನ್ನು ಮಾಡುವ ಜಾಯಮಾನ. ಅದನ್ನೇ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಳ್ಳಿ. ಆಕಾಶ ಚುಂಬಿಸುವಷ್ಟು ಎತ್ತರಕ್ಕೆ ಬೆಳೆಯುವಿರಿ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಒಂದೊಮ್ಮೆ ಯೋಚಿಸಿ.
ಕಟಕ : ಮನೆಯಲ್ಲಿ ಹೊಸ ಬಂಧ, ವ್ಯಾಪಾರದಲ್ಲಿ ಹೊಸ ಸಂಪರ್ಕ, ಒಂದು ಹಿಡಿ ಹೊಸ ಗೆಳೆಯರು ನಿಮಗೆ ದಕ್ಕುವ ದಿನ. ಹ್ಞಾಂ, ಜೀವನ ಸಂಗಾತಿಯಾಗುವ ಸದ್ಯದ ಕಾಮರೇಡ್ ಸಿಹಿ ಸುದ್ದಿಯಾಂದನ್ನು ಕೊಡುತ್ತಾರೆ.
ಸಿಂಹ : ಬೇರೆಯವರ ಜುಟ್ಟು ನಿಮ್ಮ ಕೈಲಿರಬಹುದು. ಹಾಗಂತ ಅವರನ್ನು ಮೇಲೆತ್ತಲು ಯತ್ನಿಸದೆ, ಅವರ ಮೇಲೆ ಕಾಲಿಟ್ಟು ನೀವು ಮಾತ್ರ ಮೇಲೇರಲು ಹೋದರೆ, ನೆಲದ ಮೇಲೆ ಹಲ್ಲುದುರೀತು.
ಕನ್ಯಾ : ಅತೀವ ಒತ್ತಡ ಕೆಲಸದ ವೇಗ ಕಡಿಮೆಯಾಗುವಂತೆ ಮಾಡಿದೆ. ನಿಮ್ಮಲ್ಲಿ ಛಾತಿಯಿದೆ. ಮನಸ್ಸು ಗಟ್ಟಿ ಮಾಡಿಕೊಳ್ಳಿ. ಕೆಲಸದ ಮೇಲೆ ತೀವ್ರ ನಿಗಾ ಇಟ್ಟು, ಸಾಧಿಸಿ ತೋರಿಸಿ.
ತುಲಾ : ಹರಟೆ ಹೊಡೆಯುತ್ತಲೇ ವ್ಯಾಪಾರಿ ಸಲಹೆ ನಿಮಗೆ ತಾನೇ ತಾನಾಗಿ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಷ್ಟು ಯೋಚನೆ ಮಾಡಬೇಕಷ್ಟೆ. ಆಗ ನೀವು ಕಾಣುತ್ತಿರುವ ಕನಸು ನನಸಾದೀತು.
ವೃಶ್ಚಿಕ : ಅಭದ್ರತೆ ಮಂಕು ಕವಿಸಿದೆ. ಇದೇನೂ ಪರ್ಮನೆಂಟಲ್ಲ. ಸಿಗುವ ಎಳ್ಳಷ್ಟು ಅವಕಾಶವನ್ನೇ ಆಕಾಶವನ್ನಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದೆ. ಧೈರ್ಯ ತಂದುಕೊಂಡು ಮುನ್ನುಗ್ಗಿ.
ಧನಸ್ಸು : ವಿರೋಧಿಗಳು ಇಡುತ್ತಿರುವ ಹೆಜ್ಜೆೆಯ ಜಾಡನ್ನು ಇಂಚಿಂಚೂ ಗುರ್ತಿಸುವುದರಲ್ಲಿ ನಿಮ್ಮ ಯಶಸ್ಸು ಅಡಗಿದೆ. ಅವರು ಹೋಗೋ ಹಾದಿಯಲ್ಲಿ ಯಾವುದೇ ಕಾರಣಕ್ಕೂ ಹೋಗಬೇಡಿ. ಹೀಗೆ ಮಾಡಿದಲ್ಲಿ ನೀವೇ ನಂಬರ್ ಒನ್.
ಮಕರ : ನಿಮ್ಮ ಯಶಸ್ಸು ನೀವೆಷ್ಟು ಜನಪ್ರಿಯರು ಎಂಬುದನ್ನೇ ತೀವ್ರವಾಗಿ ಅವಲಂಬಿಸಿದೆ. ಒಂದೇ ಚಿಟಿಕೆಗೆ ನೀವು ಅರಳಿ ಕಟ್ಟೆಗಾಗುವಷ್ಟು ಜನರನ್ನು ಸೇರಿಸಬಲ್ಲಿರಿ. ಆದರೆ ಅವರಲ್ಲಿ ಅಯೋಗ್ಯರನ್ನು ಶೋಧಿಸಿಬಿಡಿ.
ಕುಂಭ : ಬದುಕಿನ ಬಗೆಗೆ ಈ ತೆರನಾದ ಜಿಗುಪ್ಸೆ ಸಲ್ಲ. ಕಷ್ಟ ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದಾ? ಇವೆಲ್ಲಾ ಇದ್ದದ್ದೆ. ನಾಳೆ ಕಡೆ ನೋಡಿ. ಯಶಸ್ಸು ಕಟ್ಟಿಟ್ಟ ಬುತ್ತಿ.
ಮೀನ : ಸುಡುಚಿಂತೆ. ದ್ವಂದ್ವ. ಗೊಂದಲ. ಆಲಸ್ಯ. ಯಾವುದರಲ್ಲೂ ಮನ್ಸಸಿಲ್ಲ. ದೇಹ ಇಲ್ಲಿದ್ದರೆ, ಮನಸ್ಸು ಊರಾಚೆ. ಏನಾದರೂ ನಿರ್ಧಾರ ಕೈಗೊಳ್ಳಲೇ ಬೇಕು. ಎರಡೂ ಉತ್ತಮ ಆಯ್ಕೆ ಎನಿಸಿದರೂ, ದೇವರ ಮೊರೆ ಹೋಗಿ ಲಾಟರಿ ಎತ್ತಾದರೂ ಒಂದನ್ನು ಆರಿಸಿಕೊಳ್ಳಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications