ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿಯಲ್ಲಿ ಯಕ್ಷಗಾನ ಕೇಂದ್ರ

By Staff
|
Google Oneindia Kannada News

ಮಂಗಳೂರು : ಕರಾವಳಿಯ ಪ್ರಸಿದ್ಧ ಪೌರಾಣಿಕ ಕಲೆ ಯಕ್ಷಗಾನ ಕಲಾ ಕೇಂದ್ರ ಭಾನುವಾರದಂದು ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವ ವಿದ್ಯಾಲಯದಲ್ಲಿ ಉದ್ಘಾಟನೆಗೊಂಡಿತು.

ಸಮೃದ್ಧ ಕಲೆ ಯಕ್ಷಗಾನ ಕರಾವಳಿಯ ಜನಜೀವನವನ್ನು ಬಿಂಬಿಸುತ್ತದೆ ಎಂದು ಕಲಾ ಕೇಂದ್ರವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು. ಯಕ್ಷಗಾನ ಕ್ಷೇತ್ರದಲ್ಲಿ ಧರ್ಮಸ್ಥಳ ಕಳೆದೆರಡು ದಶಕಗಳಿಂದ ಕೆಲಸ ಮಾಡುತ್ತಾ ಬಂದಿರುವುದನ್ನು ಸ್ಮರಿಸಿಕೊಂಡ ಅವರು ವಿಶ್ವವಿದ್ಯಾಲಯದ ಕಲಾ ಕೇಂದ್ರ ಆರಂಭಿಸುತ್ತಿರುವುದನ್ನು ಶ್ಲಾಘಿಸಿದರು.

ವಿಶ್ವ ವಿದ್ಯಾಲಯದ ಉಪಕುಲಪತಿ ಎಸನ. ಗೋಪಾಲ್‌ , ಹಿರಿಯ ಯಕ್ಷಗಾನ ಕಲಾವಿದ ಶೇಣಿ ಗೋಪಾಲ ಕೃಷ್ಣ ಭಟ್‌ ಮತ್ತು ಯಕ್ಷಗಾನ ಕಲಾವಿದರೂ ಆಗಿರುವ ಶಾಸಕ ಕುಂಬ್ಳೆ ಸುಂದರರಾವ್‌ ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X