ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ40 ಮಂದಿಗೆ ಎಚ್ಐವಿ
ದಾವಣಗೆರೆ : ಕಳೆದ ವರ್ಷ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 8 ಮಂದಿ ಏಡ್ಸ್ನಿಂದ ಸತ್ತಿದ್ದಾರೆ. ಆದರೆ ಈ ಘಟನೆ ಸರ್ಕಾರದ ಗಮನಕ್ಕೇ ಬರಲಿಲ್ಲ ಎಂದು ಶಿವಮೊಗ್ಗ ಮೂಲದ ಏಡ್ಸ್ ನಿರ್ಮೂಲನಾ ಸಂಸ್ಥೆ ‘ಜಾಗೃತಿ’ಯ ಅಧ್ಯಕ್ಷ ಎಚ್.ಎಂ.ಶಾಂತಕುಮಾರ್ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದ ಶ್ರೀ ಚನ್ನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಾಂತಕುಮಾರ್, ಹೊನ್ನಾಳಿ ತಾಲ್ಲೂಕಿನಲ್ಲಿ ಸುಮಾರು 40 ಮಂದಿ ಎಚ್ಐವಿ ಧನಾತ್ಮಕ ಕಣಗಳನ್ನು ಹೊಂದಿದ್ದಾರೆ. ಅಂಥವರಿಗೆ ನೈತಿಕ ಮತ್ತು ಆರ್ಥಿಕ ನೆರವನ್ನು ಸಂಸ್ಥೆ ಕೊಡುತ್ತಾ ಬಂದಿದೆ ಎಂದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನ ಗೌಡ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಶಿವಶಂಕರ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಾಗೃತಿ ಸಂಸ್ಥೆಯ ಸಲಹೆಗಾರ ಡಾ.ರೇವಣಸಿದ್ಧಪ್ಪ ಕೂಡ ಏಡ್ಸ್ ಜಾಗೃತಿ ಬಗ್ಗೆ ಮಾತನಾಡಿದರು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]