ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂದಗೆರೆಯಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆ
ಮಂಡ್ಯ : ಮೈಸೂರು- ಹಾಸನ ನಡುವಿನ ಮಂದಗೆರೆ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಆರಂಭವಾಗಲಿದ್ದು, ಕಿಕ್ಕೇರಿ, ಮಂದಗೆರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ ಜನರ ಬಹುದಿನಗಳ ಬೇಡಿಕೆ ಈಡೇರಿದೆ.
ಮೈಸೂರಿನಿಂದ ಹೊರಡುವ ರೈಲು ಗಾಡಿಗಳು ಮಂದಗೆರೆ ಮೂಲಕ ಹಾದು ಹೋಗುತ್ತಿದ್ದರೂ ಅಲ್ಲಿ ರೈಲು ನಿಲುಗಡೆ ಇರಲಿಲ್ಲ. ಇದರಿಂದ ಸುತ್ತ ಮುತ್ತಲಿನ ಜನರು ಮುಂದಿನ ನಿಲ್ದಾಣವನ್ನೇ ಅವಲಂಭಿಸಬೇಕಾಗಿತ್ತು. ಇನ್ನು ಮುಂದೆ ಎಲ್ಲಾ ಎಕ್ಸ್ ಪ್ರೆಸ್ ರೈಲುಗಳು ಮಂದಗೆರೆಯಲ್ಲಿ ನಿಲ್ಲಲಿವೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]