Get Updates
Get notified of breaking news, exclusive insights, and must-see stories!

ಮಂಗಳೂರು- ಮುಂಬೈಗಳಲ್ಲಿ ಜೀತಕ್ಕಿದ್ದ 40 ಮಕ್ಕಳಿಗೆ ಹೊಸಜೀವನ

ಹಾಸನ : ಮಂಗಳೂರು- ಉಡುಪಿ ಹಾಗೂ ಮುಂಬೈನಲ್ಲಿ ಜೀತ ಮಾಡುತ್ತಿದ್ದ ಸುಮಾರು 40 ಮಕ್ಕಳನ್ನು ಆ ನರಕದಿಂದ ಪಾರು ಮಾಡಿ, ಅವರಿಗೆ ಹಾಸನ ಪೊಲೀಸರು ಹೊಸ ಬದುಕನ್ನು ನೀಡಿದ್ದಾರೆ.

ಜಿಲ್ಲೆಯ ಐದಹಳ್ಳಿ ಎಂಬ ಲಂಬಾಣಿ ನಾಯಕರೇ ಹೆಚ್ಚಾಗಿರುವ ಹಳ್ಳಿ. ಅಲ್ಲೊಂದು ಶಾಲೆ. ಶಾಲೆಯ ದಾಖಲಾತಿ ಪುಸ್ತಕದಲ್ಲಿ 76 ವಿದ್ಯಾರ್ಥಿಗಳ ಹೆಸರುಗಳು ನೋಂದಾವಣೆಯಾಗಿವೆ. ಆದರೆ ಶಾಲೆಗೆ ಹಾಜರಾಗುತ್ತಿದ್ದುದು 8 ಮಕ್ಕಳು ಮಾತ್ರ. ಜಿಲ್ಲೆಯ ಉಪ ವಿಭಾಗಾಧಿಕಾರಿಗೆ ಅನುಮಾನ ಬಂದ ಕಾರಣ ತಲಾಶು ಮಾಡಿದ್ದಾರೆ. ಹಿಂದುಳಿದ ಈ ಹಳ್ಳಿಯ ತಂದೆ-ತಾಯಂದಿರೇ ಹಣದಾಸೆಗೆ ತಮ್ಮ ಮಕ್ಕಳನ್ನು ಮುಂಬೈ, ಮಂಗಳೂರು- ಉಡುಪಿ ಜನರಿಗೆ ಮಾರಿಕೊಂಡಿರುವುದು ಪತ್ತೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಮುದುಸಿ ಗ್ರಾಮದ 3 ಮಕ್ಕಳು ಹಾಗೂ ಹಾಸನದ ಗೌರಿ ಕೊಪ್ಪಲಿನ ಒಬ್ಬ ಹೆಣ್ಣು ಮಗಳೂ ಜೀತಕ್ಕಿದ್ದುದು ಬೆಳಕಿಗೆ ಬಂದಿದೆ.

ಹಾಸನ ಜಿಲ್ಲಾಧಿಕಾರಿ ಕನಿರಾಂ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಂ.ಎ.ಸಲೀಂ ಅವರಿಗೆ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ಪೊಲೀಸ್‌ ಉಪ ನಿರೀಕ್ಷಕ ಉಮೇಶ್‌ ಜಿ.ಸೇಠ್‌ ನೇತೃತ್ವದ ತಂಡ ಚುರುಕಿನಿಂದ ಕಾರ್ಯಾಚರಣೆ ನಡೆಸಿ ಮಂಗಳೂರು, ಕಾಪು, ಉಡುಪಿ,ಬೆಳ್ತಂಗಡಿ ಹಾಗೂ ಉಪ್ಪಿನಂಗಡಿಗಳಿಗೆ ಹೋಗಿ ಮಕ್ಕಳನ್ನು ಕರೆ ತಂದಿದೆ. ಮುಂಬೈ ಪೊಲೀಸರೊಂದಿಗೆ ಸಂಪರ್ಕಿಸಿ ಅಲ್ಲಿದ್ದ 8 ಮಕ್ಕಳೂ ಸೇರಿದಂತೆ ಒಟ್ಟು 39 ಮಕ್ಕಳನ್ನು ಜೀತದಿಂದ ಪಾರು ಮಾಡಿದ್ದಾರೆ.

ಮಕ್ಕಳ ವ್ಯಾಪಾರದ ಈ ಪ್ರಕರಣದಲ್ಲಿ ದಲ್ಲಾಳಿಗಳಾಗಿದ್ದ ಹಾಸನದ ಜರೂಮಿಜರೇನ, ಮುಂಬೈನ ಜೇಮ್ಸ್‌ ಡಿಸೋಜ ಮತ್ತು ಕೆ.ಆರ್‌.ಜೇಮ್ಸ್‌ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಪೋಷಕರ ವಿಚಾರಣೆಯೂ ನಡೆದಿದೆ. ಜೀತ ಮುಕ್ತ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯ ಜವಾಬ್ದಾರಿಯನ್ನು ಸ್ವತಃ ಜಿಲ್ಲಾಧಿಕಾರಿಯೇ ವಹಿಸಿದ್ದಾರೆ. ಈ ದೊಡ್ಡ ಸವಾಲನ್ನು ಅತಿ ಕಡಿಮೆ ಅವಧಿಯಲ್ಲಿ ಬೇಧಿಸಿದ ಉಮೇಶ್‌ ಜಿ.ಸೇಠ್‌ ನೇತೃತ್ವದ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+