ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಗ್ರಹಗತಿಗಳು ಚೆನ್ನಾಗಿವೆ. ನೌಕರಿಯಲ್ಲಿ ಬಡ್ತಿ, ಬಯಸಿದೆಡೆಗೆ ವರ್ಗಾವಣೆ. ಮಣ್ಣೂ ಚಿನ್ನವಾಗುವ ಕಾಲ. ದೇವತಾರ್ಚನೆಯಿಂದ ಯಶಸ್ಸು ಖಂಡಿತ.ವೃಷಭ : ನೀವು ಬೇಡ ಬೇಡ ಎಂದರೂ ದೂರ ಪ್ರಯಾಣ ಹೋಗಲೇ ಬೇಕು. ಅನಿರೀಕ್ಷಿತವಾಗಿ ಧನಲಾಭ. ಧನದೇವತೆ ಬಾಗಿಲು ತಟ್ಟುತ್ತಿದ್ದಾಳೆ. ಉನ್ನತ ಶಿಕ್ಷಣದಲ್ಲಿ ಅದ್ವಿತೀಯ ಸಾಧನೆ.
ಮಿಥುನ : ಮನೆ ದೇವರನ್ನು ಮೂಟೆ ಕಟ್ಟಿ, ನೆರೆ ದೇವರಿಗೆ ಕೊಂಡ ಹಾಯುವ ಅಗತ್ಯ ಇಲ್ಲ. ನಿಮ್ಮ ಕುಲದೇವತೆಯೇ ನಿಮ್ಮನ್ನು ಕಾಪಾಡುತ್ತಾಳೆ, ಕಠಿಣ ಪ್ರಯತ್ನದಿಂದ ವ್ಯವಹಾರದಲ್ಲಿ ಮುನ್ನಡೆ.
ಕಟಕ : ಕೌಟುಂಬಿಕ ವ್ಯವಹಾರದಲ್ಲಿ ಇಂದು ಸ್ವಲ್ಪ ಕಿರಿಕಿರಿ. ಇಂದು ನಿಮಗೆ ಮೌನವೇ ಬಂಗಾರ. ನೀವು ಸೋತರೂ ಅಡ್ಡಿಯಿಲ್ಲ. ಮುಂದೆ ನೆಮ್ಮದಿಗೆ ಇದುವೇ ಸೋಪಾನ.
ಸಿಂಹ : ಹೇಳಿ ಕೇಳಿ ನೀವು ಸಿಂಹದಂತವರು. ಯಾವುದನ್ನೂ ಸುಲಭವಾಗಿ ತರ್ಕ ಮಾಡದೆ ಒಪ್ಪಿಕೊಳ್ಳುವುದಿಲ್ಲ. ಇಂದು ತಗ್ಗಿ ಬಗ್ಗಿ ನಡೆದರೆ ಒಳಿತು. ಅನಿರೀಕ್ಷಿತ ಸಿಹಿ ಸುದ್ದಿ ಕಾದಿದೆ.
ಕನ್ಯಾ : ಇಂದು ನಿಮ್ಮ ಮನಸ್ಸಿಗೂ ಮೋಡ ಕವಿದಂತಾಗಿದೆ. ಹೊರಗಿನ ಚಂಡಮಾರುತಕ್ಕೆ ನೀವು ಹೆದರುವ ಅಗತ್ಯವಿಲ್ಲ. ಮಳೆ ಹುಯ್ದ ಮೇಲೆ ತಣ್ಣಗಾಗುವಂತೆ ಎಲ್ಲ ಶಾಂತವಾಗುತ್ತದೆ. ತಾಳ್ಮೆ ಕಾಪಾಡಿಕೊಳ್ಳಿ.
ತುಲಾ : ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಅಡ್ಡಿಯೇ ಹೆಚ್ಚು. ಶತ್ರುಗಳ ಭಯ ಇದೆ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿದ್ದರೆ ಒಳಿತು. ಭೂ ವ್ಯವಹಾರದಲ್ಲಿ ಮಾತ್ರ ಜಯ ಸಿದ್ಧ.
ವೃಶ್ಚಿಕ : ಎಲ್ಲರ ಕಣ್ಣೂ ನಿಮ್ಮ ಮೇಲೇ ಇದೆ. ನಿಮ್ಮ ನಡತೆಯನ್ನು ತಿದ್ದಿಕೊಳ್ಳಿ. ಕಾಮಾತುರರಂತೆ ವರ್ತಿಸದಿರಿ. ಸಮಾಜಕ್ಕಾದರೂ ಅಂಜಲೇ ಬೇಕಲ್ಲ. ಅನವಶ್ಯಕ ಅಪವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಧನಸ್ಸು : ಅನಿರೀಕ್ಷಿತ ಅತಿಥಿ ಬಂದನೆಂದು ಬೇಜಾರಾಗಬೇಡಿ. ಅವರಿಂದ ನಿಮಗೇ ಹೆಚ್ಚು ಲಾಭ. ಬಾಹ್ಯ ಪ್ರಭಾವಕ್ಕೆ ಒಳಗಾಗದಿರಿ. ಮನಸ್ಸಿದ್ದರೆ ಮಾರ್ಗ.
ಮಕರ : ಹೊಸ ಯೋಚನೆಗಳಿಂದ ಪ್ರಗತಿ ಸಾಧ್ಯ. ವಿಜ್ಞಾನಿಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ತಾಯಿಯ ಕಡೆಯಿಂದ ನಿಮಗೆ ಧನಯೋಗ ಇದೆ. ಪ್ರಣಯಿಗಳಿಗೆ ಇದು ಸಂಭ್ರಮದ ಕಾಲ.
ಕುಂಭ : ಅನಿರೀಕ್ಷಿತ ಖರ್ಚು ಕಾದಿದೆ. ಎದೆಗುಂದುವ ಅಗತ್ಯವಿಲ್ಲ. ಕಾಲವೇ ಎಲ್ಲಕ್ಕೂ ಉತ್ತರ ನೀಡುತ್ತದೆ. ಆತಂಕದ ನಡುವೆಯೇ ಪ್ರಯಾಣ ಅನಿವಾರ್ಯ. ಕೈಯಿಟ್ಟ ಕೆಲಸಕ್ಕೆ ಕಂಟಕ ಇದೆ.
ಮೀನ : ಇಂದು ನಿಮಗೆ ಸಂತೋಷದ ದಿನ. ಇಲ್ಲ ಸಲ್ಲದ ಮಾತುಗಳಿಗೆ ಕವಿಗೊಡಬೇಡಿ. ಎಲ್ಲ ವ್ಯವಹಾರದಲ್ಲೂ ಜಯ ನಿಮ್ಮದೆ. ವ್ಯಾಪಾರದಲ್ಲಿ ಮುನ್ನಡೆ. ಧನಲಕ್ಷ್ಮಿಯ ಕೃಪೆ ನಿಮಗಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications