ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಗ್ರಹಗತಿಗಳು ಚೆನ್ನಾಗಿವೆ. ನೌಕರಿಯಲ್ಲಿ ಬಡ್ತಿ, ಬಯಸಿದೆಡೆಗೆ ವರ್ಗಾವಣೆ. ಮಣ್ಣೂ ಚಿನ್ನವಾಗುವ ಕಾಲ. ದೇವತಾರ್ಚನೆಯಿಂದ ಯಶಸ್ಸು ಖಂಡಿತ.

ವೃಷಭ : ನೀವು ಬೇಡ ಬೇಡ ಎಂದರೂ ದೂರ ಪ್ರಯಾಣ ಹೋಗಲೇ ಬೇಕು. ಅನಿರೀಕ್ಷಿತವಾಗಿ ಧನಲಾಭ. ಧನದೇವತೆ ಬಾಗಿಲು ತಟ್ಟುತ್ತಿದ್ದಾಳೆ. ಉನ್ನತ ಶಿಕ್ಷಣದಲ್ಲಿ ಅದ್ವಿತೀಯ ಸಾಧನೆ.

ಮಿಥುನ : ಮನೆ ದೇವರನ್ನು ಮೂಟೆ ಕಟ್ಟಿ, ನೆರೆ ದೇವರಿಗೆ ಕೊಂಡ ಹಾಯುವ ಅಗತ್ಯ ಇಲ್ಲ. ನಿಮ್ಮ ಕುಲದೇವತೆಯೇ ನಿಮ್ಮನ್ನು ಕಾಪಾಡುತ್ತಾಳೆ, ಕಠಿಣ ಪ್ರಯತ್ನದಿಂದ ವ್ಯವಹಾರದಲ್ಲಿ ಮುನ್ನಡೆ.

ಕಟಕ : ಕೌಟುಂಬಿಕ ವ್ಯವಹಾರದಲ್ಲಿ ಇಂದು ಸ್ವಲ್ಪ ಕಿರಿಕಿರಿ. ಇಂದು ನಿಮಗೆ ಮೌನವೇ ಬಂಗಾರ. ನೀವು ಸೋತರೂ ಅಡ್ಡಿಯಿಲ್ಲ. ಮುಂದೆ ನೆಮ್ಮದಿಗೆ ಇದುವೇ ಸೋಪಾನ.

ಸಿಂಹ : ಹೇಳಿ ಕೇಳಿ ನೀವು ಸಿಂಹದಂತವರು. ಯಾವುದನ್ನೂ ಸುಲಭವಾಗಿ ತರ್ಕ ಮಾಡದೆ ಒಪ್ಪಿಕೊಳ್ಳುವುದಿಲ್ಲ. ಇಂದು ತಗ್ಗಿ ಬಗ್ಗಿ ನಡೆದರೆ ಒಳಿತು. ಅನಿರೀಕ್ಷಿತ ಸಿಹಿ ಸುದ್ದಿ ಕಾದಿದೆ.

ಕನ್ಯಾ : ಇಂದು ನಿಮ್ಮ ಮನಸ್ಸಿಗೂ ಮೋಡ ಕವಿದಂತಾಗಿದೆ. ಹೊರಗಿನ ಚಂಡಮಾರುತಕ್ಕೆ ನೀವು ಹೆದರುವ ಅಗತ್ಯವಿಲ್ಲ. ಮಳೆ ಹುಯ್ದ ಮೇಲೆ ತಣ್ಣಗಾಗುವಂತೆ ಎಲ್ಲ ಶಾಂತವಾಗುತ್ತದೆ. ತಾಳ್ಮೆ ಕಾಪಾಡಿಕೊಳ್ಳಿ.

ತುಲಾ : ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಅಡ್ಡಿಯೇ ಹೆಚ್ಚು. ಶತ್ರುಗಳ ಭಯ ಇದೆ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿದ್ದರೆ ಒಳಿತು. ಭೂ ವ್ಯವಹಾರದಲ್ಲಿ ಮಾತ್ರ ಜಯ ಸಿದ್ಧ.

ವೃಶ್ಚಿಕ : ಎಲ್ಲರ ಕಣ್ಣೂ ನಿಮ್ಮ ಮೇಲೇ ಇದೆ. ನಿಮ್ಮ ನಡತೆಯನ್ನು ತಿದ್ದಿಕೊಳ್ಳಿ. ಕಾಮಾತುರರಂತೆ ವರ್ತಿಸದಿರಿ. ಸಮಾಜಕ್ಕಾದರೂ ಅಂಜಲೇ ಬೇಕಲ್ಲ. ಅನವಶ್ಯಕ ಅಪವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

ಧನಸ್ಸು : ಅನಿರೀಕ್ಷಿತ ಅತಿಥಿ ಬಂದನೆಂದು ಬೇಜಾರಾಗಬೇಡಿ. ಅವರಿಂದ ನಿಮಗೇ ಹೆಚ್ಚು ಲಾಭ. ಬಾಹ್ಯ ಪ್ರಭಾವಕ್ಕೆ ಒಳಗಾಗದಿರಿ. ಮನಸ್ಸಿದ್ದರೆ ಮಾರ್ಗ.

ಮಕರ : ಹೊಸ ಯೋಚನೆಗಳಿಂದ ಪ್ರಗತಿ ಸಾಧ್ಯ. ವಿಜ್ಞಾನಿಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ತಾಯಿಯ ಕಡೆಯಿಂದ ನಿಮಗೆ ಧನಯೋಗ ಇದೆ. ಪ್ರಣಯಿಗಳಿಗೆ ಇದು ಸಂಭ್ರಮದ ಕಾಲ.

ಕುಂಭ : ಅನಿರೀಕ್ಷಿತ ಖರ್ಚು ಕಾದಿದೆ. ಎದೆಗುಂದುವ ಅಗತ್ಯವಿಲ್ಲ. ಕಾಲವೇ ಎಲ್ಲಕ್ಕೂ ಉತ್ತರ ನೀಡುತ್ತದೆ. ಆತಂಕದ ನಡುವೆಯೇ ಪ್ರಯಾಣ ಅನಿವಾರ್ಯ. ಕೈಯಿಟ್ಟ ಕೆಲಸಕ್ಕೆ ಕಂಟಕ ಇದೆ.

ಮೀನ : ಇಂದು ನಿಮಗೆ ಸಂತೋಷದ ದಿನ. ಇಲ್ಲ ಸಲ್ಲದ ಮಾತುಗಳಿಗೆ ಕವಿಗೊಡಬೇಡಿ. ಎಲ್ಲ ವ್ಯವಹಾರದಲ್ಲೂ ಜಯ ನಿಮ್ಮದೆ. ವ್ಯಾಪಾರದಲ್ಲಿ ಮುನ್ನಡೆ. ಧನಲಕ್ಷ್ಮಿಯ ಕೃಪೆ ನಿಮಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X