ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನೀ ನನಗಿದ್ದರೆ ನಾ ನಿನಗೆ ಎಂಬ ಕ್ಯಾಟಗರಿಯವರಲ್ಲ ನೀವು. ಗೆಳೆಯನ ಮೇಲೆ ಎಷ್ಟೇ ಸಿಟ್ಟಿದ್ದರೂ ಅವನ ಕಷ್ಟ ಕ್ಕೆ ಸ್ಪಂದಿಸುವವರಾದ್ದರಿಂದ, ಇವತ್ತು ನಿಮಗೆ ಗೆಳೆಯನ ದರ್ಶನವಾಗಲಿದೆ. ಜೇಬು ಖಾಲಿಯಾಗಲಿದೆ ಅಂತ ಬೇರೆ ಹೇಳಬೇಕಾ, ಕೊಡುವಿಕೆಯಲ್ಲಿಯೇ ಖುಷಿ ಪಡುತ್ತಾರಿ. ನಿಮ್ಮ ಸನಿಹದಲ್ಲಿಯೇ ಶೃಂಗಾರ ಭಾಗ್ಯವಿದೆ. ಗುಡ್ ಲಕ್ !ವೃಷಭ : ಅಯ್ಯಯ್ಯಾ.. ಎಷ್ಟು ಕೆಲಸ ನಿಮ್ಮ ಮುಂದೆ ರಾಶಿ ಬಿದ್ದಿದೆ. ನಿಮ್ಮ ಬಳಿ ತಾಳ್ಮೆ ಯಾಂದಿದ್ದರೆ, ಸಾಮಾಜಿಕ ಕೆಲಸದಲ್ಲಿ , ಜಯಲಕ್ಷ್ಮಿ ತಾನಾಗೇ ಬಂದು ಪಕ್ಕ ನಿಲ್ಲುತ್ತಾಳೆ. ಸಂಜೆಯಷ್ಟೊತ್ತಿಗೆ ರಜಾ ಕಾಲದ ಪ್ರವಾಸ ಯೋಜನೆ ನಿಮ್ಮ ಟೇಬಲ್ ಮುಂದೆ ಬರಬಹುದು. ಗೆಳೆಯರನ್ನು ಪೂರ್ತಿ ನಂಬಿ ಬಿಟ್ಟೀರಾ... ಕೆಟ್ಟಿರಿ.
ಮಿಥುನ : ನಿಮ್ಮ ಹೈಟೆಕ್ ಯೋಚನೆಗಳು ಕಾರ್ಯಗತವಾಗಲಿವೆ. ನೀವು ಯಾವುದರ ಬಗ್ಗೆ ಅಧ್ಯಯನ ಮಾಡಬೇಕೆಂದು ಕೊಂಡಿದ್ದೀರೋ, ಆ ಕ್ಷೇತ್ರದಲ್ಲಿ ನಿಮಗೀಗಾಲೇ ಪರಿಣತಿ ಇದೆ. ಆದರೆ ನೀವಿನ್ನೂ ವಿದ್ಯಾರ್ಥಿ . ಕಲಿಯುವುದಕ್ಕೆ ಸಮುದ್ರದಷ್ಟಿದೆ.
ಕಟಕ : ಬಿಸಿನೆಸ್ ಸಮಸ್ಯೆಗಳ ಬಗ್ಗೆ ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತೀರಿ , ಅವು ಅವುಗಳ ಪಾಡಿಗೆ ಸರಿಹೋಗುತ್ತವೆ. ಇದು ನಿಮಗೆ ರಿಲ್ಯಾಕ್ಸಿಂಗ್ ದಿನ. ಅದೇನೋ ಪ್ರೊಜೆಕ್ಟ್ ಇದೆಯಲ್ಲಾ, ಮರೆತಿರಾ.. ಈಗ ಸುಸಮಯ ಮುಂದುವರೆಸಿ.
ಸಿಂಹ : ಸ್ನೇಹಿತರು, ಕುಟುಂಬ ನಿಮ್ಮ ಬಗ್ಗೆ ಇಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಕೆಲಸದಲ್ಲಿ ತುಸು ಬದಲಾವಣೆಯಾದರೂ ಹೆಚ್ಚು ತಲೆ ಬಿಸಿ ಮಾಡಿಕೊಳ್ಳಬೇಡಿ.
ಕನ್ಯಾ : ಇವತ್ತು ಸಂಜೆ ನೀವು ಬಂಧುಗಳೊಡನೆ ಗಮ್ಮತ್ತು ಮಾಡಬಹುದು. ಸಂಥಿಂಗ್ ಇಂಟರೆಸ್ಟಿಂಗ್. ಮನರಂಜನೆ ಕೊಡುವ ಸಂಜೆಯ ಪ್ರತೀಕ್ಷೆಯಲ್ಲಿರಿ. ನಾಳೆ ಟ್ರಿಪ್ ಹೊರಡುವ ಅವಕಾಶವೂ ಸಿಕೀತು. ಈ ನವೆಂಬರ್ ಚಳಿಯಿಂದ ರಕ್ಷಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಮತ್ತೆ.
ತುಲಾ : ಇವತ್ತೇನೋ ತೊಂದರೆ ಯಾಗುತ್ತದೆ ಎಂದು ಹೆದರಿಕೊಂಡ್ಹಂಗಿದೆ. ಹಾಗೇನಾಗದು. ಅಚಾನಕ್ ಆಗಿ ಸ್ವಲ್ಪ ಬೇಸರದ ಸುದ್ದಿ ಬರಬಹುದು. ಕಾಗೆ ಕೋಳಿ ಜಗಳಗಳದಂತಹುದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.
ವೃಶ್ಚಿಕ : ನೀವು ಹಾಕಿಕೊಂಡಿರುವ ಬಿಸಿನೆಸ್ ಪ್ಲಾನ್ ಸುಪರ್. ಗೋ ಅಹೆಡ್. ರಜಾಗಳೂ ಕಾದಿವೆ. ಆದರೂ ಮಜಾ ಮಾಡುವುದು ಬಿಟ್ಟು, ಕೆಲಸದ ಕಡೆಗೆ ಸ್ವಲ್ಪ ಗಮನ ಕೊಡಿ.
ಧನಸ್ಸು : ಲೋನು, ಫೈನಾನ್ಸ್ ಆಫೀಸರ್ ಅಂತ ಸುತ್ತಾಡಿ ಸುಸ್ತಾಯಿತೇ ... ಕೊನೆಗೆ ಗೆಲುವು ನಿಮ್ಮದೇ ಆದ್ದರಿಂದ ಡೋಂಟ್ ಬಿ ಡಿಪ್ರೆಸ್ಡ್.
ಮಕರ : ಆತ್ಮ ಸಾಕ್ಷಿ ಏನೋ ಕಿರಿ ಕಿರಿ ಮಾಡುತ್ತಿದೆ ಅನಿಸುತ್ತಿದೆ ತಾನೇ. ಕಿವುಡರಾದೀರಾ ಜೋಕೆ. ಅನಾಸಕ್ತಿ ತೋರಿದರೆ, ದಾರಿ ಮಧ್ಯೆ ರಾಶಿ ಕಷ್ಟಗಳು ಕುಟುಕಬಹುದು.
ಕುಂಭ : ಉತ್ತರೋತ್ತರ ಅಭಿವೃದ್ಧಿಯ ಕನಸಿನ ಮೊದಲು ಮೆಟ್ಟಿಲು ಏರುತ್ತಿದ್ದೀರಿ. ಆರೋಗ್ಯ, ಸಂಗೀತ ... ವ್ಯಾಯಾಮ ಎಲ್ಲ ಈಗ ಆರಂಭಿಸಲು ಸಕಾಲ.
ಮೀನ : ಪರಿಸ್ಥಿತಿಯ ಪೂರ್ತಿ ಉಪಯೋಗ ಪಡೆದುಕೊಳ್ಳುವುದು ನಿಮ್ಮ ಜಾಣತನಕ್ಕೆ ಬಿಟ್ಟಿದ್ದು. ಔದ್ಯೋಗಿಕ ಕ್ಷೇತ್ರದಲ್ಲಿನ ಜನಪ್ರಿಯತೆ, ಪೂಸಿ ಹೊಡೆಯುವಿಕೆಯಿಂದ ಲಾಭವಾದೀತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications