ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುಟ್ಟರಾಜ ಗವಾಯಿಗೆ ವಿಶೇಷ ಸಾಧಕ ಪ್ರಶಸ್ತಿ
ಗದಗ : ಲೌಕಿಕ ಜಗತ್ತನ್ನು ಕಾಣುವ ಕಣ್ಣನ್ನು ಕಳೆದುಕೊಂಡಿದ್ದರೂ, ಪಾರಮರ್ಥಿಕ ಸಾಧಕವಾದ ಸಂಗೀತದಲ್ಲಿ ಅಪಾರ ಸಾಧನೆ ಮಾಡಿರುವ ನಾಡಿನ ಪ್ರಸಿದ್ಧ ಸಂಗೀತಗಾರ ಡಾ. ಪುಟ್ಟರಾಜ ಗವಾಯಿ ಅವರಿಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 3 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು. ಸಾವಿರಾರು ಅಂಧರಿಗೆ ಸಂಗೀತ ಶಿಕ್ಷಣ ನೀಡಿ, ಅವರ ಬಾಳಿಗೆ ತಿರುವು ನೀಡಿರುವುದನ್ನು ಕೇಂದ್ರ ಸರ್ಕಾರ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಪ್ರಮುಖವಾಗಿ ಪರಿಗಣಿಸಿದೆ.
(ಇನ್ಫೋ ವಾರ್ತೆ)
Story first published: Wednesday, November 22, 2000, 5:30 [IST]