ಬೀರಪ್ಪ ದ್ಯಾವರ ಗುಡಿಯಲ್ಲಿ ಪೂಜೆ
ಗಾಜನೂರು : ಮೂರುವರೆ ತಿಂಗಳು ಅಣ್ಣಾವ್ರಿಲ್ಲ ಎಂಬ ನೋವನ್ನು ಕಣ್ಣಲ್ಲಿ ತುಂಬಿ ಕೊಂಡೇ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಗಾಜನೂರಿನ ಮಂದಿಯ ಕಣ್ಣುಗಳಲ್ಲಿ ಬುಧವಾರದಂದು ಸಂತೋಷ ಮಿಂಚು !
ಗಾಜನೂರಿನಲ್ಲಿ ಬುಧವಾರ ದೀಪಾವಳಿ, ನಾಡಹಬ್ಬ. ಪಟಾಕಿ ಸಿಡಿಸಿ, ಸಿಹಿ ಹಂಚಿದ ಗಾಜನೂರ ಸಂಭ್ರಮದಲ್ಲಿ ಗಲಾಟೆಯಿರಲಿಲ್ಲ. ರಾಜ್ ಕುಮಾರ್ ಅವರ ಇಷ್ಟ ದೈವಸ್ಥಾನ, ಬೀರಪ್ಪ ದೇವರ ಗುಡಿಯಲ್ಲಿ ಪೂಜೆ, ಪುನಸ್ಕಾರಗಳು ನಡೆದವು.
ಸರಿಯಾಗಿ 108 ದಿನಗಳ ಹಿಂದೆ ರಾಜ್ ಕುಮಾರ್ ಅವರ ಗಾಜನೂರಿನ ಮನೆಯಲ್ಲಿ ಗೃಹ ಪ್ರವೇಶದ ಕಲರವ ತುಂಬಿತ್ತು. ಮನೆ ತುಂಬಾ ನಗು , ಮಾತು, ಹೋಮ ಹವನದ ಹೊಗೆ ಸುಳಿದಾಡುತ್ತಿತ್ತು. ಮತ್ತೆ ಅದೇ ಸ್ಥಿತಿ ಗಾಜನೂರ ಹೊಸ ಮನೆಯಲ್ಲಿ ಬುಧವಾರದಿಂದ ಮರುಕಳಿಸಿದೆ.
ದೇವರು ನಮ್ಮ ದೀರ್ಘ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದಾನೆ. ಸಂಭ್ರಮ ಆಚರಿಸಲು ಇದಕ್ಕಿಂತ ಸುದಿನ ಇನ್ನೊಂದಿಲ್ಲ ಎಂದು ರಾಜ್ಕುಮಾರ್ ಅವರ ಅಕ್ಕನ ಮಗ ಗೋಪಾಲ್ ತನ್ನ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಅವರ ಪತ್ನಿ ಮನೆ ದೇವರ ಪೂಜಾ ಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಸಂತಸವನ್ನು ಹಂಚಿಕೊಳ್ಳುವುದಕ್ಕೂ ಪುರುಸೊತ್ತಿಲ್ಲದೇ ಓಡಾಡುತ್ತಿದ್ದರು. ರಾಜ್ ಮನೆಯಲ್ಲಿ ಬುಧವಾರ ತೋಟದ ಕೆಲಸಕ್ಕೆ ರಜೆ ನೀಡಲಾಗಿತ್ತು .
ಹೊಸ ಮನೆಯಲ್ಲಿ ರಾಜ್ ಅಪಹರಣದ ದಿನ ಮಾಂಸದೂಟವನ್ನು ಏರ್ಪಡಿಸಿದ್ದಂತೆ, ಬಿಡುಗಡೆಯ ದಿನವೂ ಮಾಂಸದೂಟ ಏರ್ಪಡಿಸಲಾಗಿತ್ತು. ರಾಜ್ರ ತಂದೆ ಸಿಂಗನೆಲ್ಲೂರು ಪುಟ್ಟಸ್ವಾಮಯ್ಯ ಅವರ ತಿಥಿಯನ್ನೂ ಮಹಾಲಯ ಪಕ್ಷದಲ್ಲಿ ಆಚರಿಸಲಾಗದಿರುವುದರಿಂದ, ಈಗ ಆಚರಿಸಲಾಗುವುದು ಎಂದು ಗೋಪಾಲ್ ಹೇಳಿದ್ದಾರೆ.
ಅನೇಕ ಪತ್ರಕರ್ತರು, ಚಾಮರಾಜ ನಗರದ ಪೊಲೀಸ್ ಅಧೀಕ್ಷಕ ಮತ್ತು ಇತರ ಪೊಲೀಸ್ ಹಿರಿಯ ಅಧಿಕಾರಿಗಳು ಮೂರು ಗಂಟೆ ಅವಧಿಗೂ ಮುಂಚೆ ಗಾಜನೂರ ಮನೆಗೆ ತೆರಳಿ ರಾಜ್ ಕುಮಾರ್ ಅವರ ಬರವಿಗೆ ಕಾದು ಕುಳಿತಿದ್ದರು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications