ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಸ್ತ್ರ ಚಿಕಿತ್ಸೆಯ ನಂತರ ಐವರ ದೃಷ್ಟಿ ನಾಶ
ಬೀದರ್ : ನೇತ್ರ ಶಸ್ತ್ರ ಚಿಕಿತ್ಸೆಗೆ ಒಳಗಾದ ಐವರು ವೃದ್ಧರು ಆಪರೇಷನ್ ನಂತರ ತಮ್ಮ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಪ್ರಕರಣ ಬೀದರ್ಗೆ ಸಮೀಪದ ಗೊರನಳ್ಳಿ ಗ್ರಾಮದಿಂದ ವರದಿಯಾಗಿದೆ.
ಜನವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನಡೆದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 20 ದಿನಗಳ ಹಿಂದೆ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದ ಗೊರನಳ್ಳಿಯ ಶಿವಮ್ಮ, ಸುಂದ್ರಮ್ಮ, ಬೀರಪ್ಪ, ಬಕ್ಕಮ್ಮ ಹಾಗೂ ಶಿವರಾಮಪ್ಪ ಅವರು, ತಮ್ಮ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಿದ ನಂತರ ಮೊದಲು ಕಾಣುತ್ತಿದ್ದಷ್ಟೂ ಕಣ್ಣು ಕಾಣುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಮಿಗಿಲಾಗಿ ಈ ಐವರೂ ಕಳೆದ 15 ದಿನಗಳಿಂದ ಕಣ್ಣಿನ ನೋವಿನಿಂದಲೂ ಬಳಲುತ್ತಿದ್ದಾರೆ ಎನ್ನಲಾಗಿದೆ.
Story first published: Tuesday, November 14, 2000, 5:30 [IST]