ಇಂದು ಮುಖ್ಯಮಂತ್ರಿ ಕೃಷ್ಣ ಅವರಿಂದ ‘ರಂಗ ಶಂಕರ’ದ ಶಂಕು ಸ್ಥಾಪನೆ
ಬೆಂಗಳೂರು : ಇನ್ನು ಕೆಲ ತಿಂಗಳುಗಳಲ್ಲೇ ಚಿತ್ರನಟ ದಿವಂಗತ ಶಂಕರ್ನಾಗ್ ಅವರ ಥಿಯೇಟರ್ ಸಂಕೀರ್ಣ ಕಟ್ಟಬೇಕೆಂಬ ಕನಸು ನನಸಾಗಲಿದೆ. ಗುರುವಾರ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜೆಪಿ ನಗರ 2ನೇ ಹಂತದ ನಿವೇಶನದಲ್ಲಿ ಥಿಯೇಟರ್ ಸಂಕೀರ್ಣ ರಂಗ ಶಂಕರದ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಮೂರು ಕೋಟಿ ರುಪಾಯಿಗಳ ಈ ಯೋಜನೆ ರೂಪುಗೊಂಡದ್ದು ಸಂಕೇತ್ ಬಳಗದ ಟ್ರಸ್ಟಿಗಳಾದ ಗಿರೀಶ್ ಕಾರ್ನಾಡ್, ಅರುಂಧತಿ ನಾಗ್, ಸುರೇಂದ್ರನಾಥ್, ಪರಮೇಶ್ವರಪ್ಪ, ವಿಜಯ್ ಪಡಕಿ ಹಾಗೂ ಎಂ.ಎಸ್. ಸತ್ಯು ಅವರಿಂದ. 300 ಪ್ರೇಕ್ಷಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಲಿರುವ ಸಂಕೀರ್ಣ ಸುಂದರ ವಿನ್ಯಾಸದಲ್ಲಿ 3 ಸ್ಥರಗಳಲ್ಲಿ ನಿರ್ಮಾಣವಾಗಲಿದೆ.
ಮುಖ್ಯಮಂತ್ರಿಗಳೇ ಖುದ್ದು ಸಮಾರಂಭಕ್ಕೆ ಬರುತ್ತಿರುವುದರಿಂದ ಯೋಜನೆಗೆ ಸರ್ಕಾರ ಬೆಂಬಲ ನೀಡಲಿದೆ ಎಂಬುದು ಖಾತ್ರಿಯಾಗಲಿದೆ. ಈಗಾಗಲೇ ಸರ್ಕಾರ 20 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಈ ಸಂಕೀರ್ಣದಲ್ಲಿ ಕಲಾವಿದರ ತಾಲೀಮು ಹಾಗೂ ಅಭ್ಯಾಸಕ್ಕೂ ಅವಕಾಶ ದೊರೆಯಲಿದೆ.
ನಿವೇಶನದಲ್ಲಿ ರಂಗ ಸಮೂಹ ರಂಗಗೀತೆಗಳು ಹಾಗೂ ಎಲಿಫೆಂಟ್ ಅಂಡ್ ದಿ ಮೈಸ್ನ ಎರಡು ಪ್ರದರ್ಶನಗಳನ್ನು ಗುರುವಾರ ಏರ್ಪಡಿಸಿದೆ.
ಈ ಯೋಜನೆಗೆ ನೀವೂ ನೆರವು ನೀಡಬಯಸಿದಲ್ಲಿ ದಿ ಸಂಕೇತ್ ಟ್ರಸ್ಟ್, ದೂರವಾಣಿ ಸಂಖ್ಯೆ 2213737ನ್ನು ಸಂಪರ್ಕಿಸಿ. ಇ- ಮೇಲ್ : [email protected]ವೆಬ್ಸೈಟ್ : www.rangashankara.org
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಒಂದಾನೊಂದು ಕಾಲದ ಒಂದು ಮುತ್ತಿನ ಕಥೆ
ಸಂಕೇ-ತ್ ಅ-ಳು-ತ್ತಿ-ದ್ದಾ-ನೆ, ಎ-ತ್ತಿ-ಕೊ-ಳ್ಳು-ವ-ವ-ರು ಯಾರು?
Sanket: on the foot
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications