ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋರಮಂಗಲ ಬಳಿ ಗೋಡೆ ಕುಸಿದು ಇಬ್ಬರ ಸಾವು
ಬೆಂಗಳೂರು : ಮಂಗಳವಾರ ಬೆಳಗ್ಗೆ ಕೋರಮಂಗಲ ಬಳಿಯ ಕತ್ತಾಲೆ ಪಾಳ್ಯದಲ್ಲಿ ಪಾಯ ತೋಡುತ್ತಿದ್ದಾಗ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದ ಕಾರಣ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
ಕೋರಮಂಗಲ 6ನೇ ಬ್ಲಾಕ್, 17ನೇ ಬಿ ಮುಖ್ಯರಸ್ತೆ ಕತ್ತಾಳೆ ಪಾಳ್ಯದ ಜಯಕುಮಾರ್ ರೆಡ್ಡಿ ಎಂಬುವರ ನಿವೇಶನದಲ್ಲಿ ಪಾಯ ತೋಡುತ್ತಿದ್ದಾಗ ಬೆಳ್ಗಗೆ 9.30ರ ವೇಳೆ ಈ ದುರ್ಘಟನೆ ಸಂಭವಿಸಿದ್ದು, ವೇಲು (25) ಮತ್ತು ಪೆರಿಸ್ವಾಮಿ (40) ನಿಧನರಾಗಿದ್ದಾರೆ. ತೀವ್ರ ಸ್ವರೂಪದ ಗಾಯಗಳಾಗಿದ್ದ ದುರ್ದೈವಿಗಳನ್ನು ಸೇಂಟ್ ಜಾನ್ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಕೊನೆಯುಸಿರೆಳೆದರು.
ಸುಂದರ್(25), ಪೊನ್ನುಸ್ವಾಮಿ(30) ಮತ್ತು ಸುಶೀಲ (25) ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಲಿ ನಿವೇಶನಕ್ಕೆ ಹೊಂದಿಕೊಂಡಿದ್ದ ಗೋಡೆಯ ಪಕ್ಕ ಪಾಯ ತೋಡಿದ್ದರಿಂದ ಶಿಥಿಲಗೊಂಡು ಕುಸಿದು ಬಿದ್ದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Story first published: Wednesday, November 8, 2000, 5:30 [IST]