ಟಾಡಾ ಬಂದಿಗಳ ವಿಚಾರಣೆ : ಇಂದು ಸುಪ್ರಿಂಕೋರ್ಟ್ ತೀರ್ಪು
ಚೆನ್ನೈ : ಟಾಡಾ ಬಂಧಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರಿಂಕೋರ್ಟ್ ಮಂಗಳವಾರ ಬೆಳಗ್ಗೆ ಘೋಷಿಸಲಿದೆ.
ನ್ಯಾಯಮೂರ್ತಿ ಎಸ್.ಪಿ.ಭರೂಚ, ನ್ಯಾಯಮೂರ್ತಿ ಡಿ.ಪಿ.ಮೊಹಾಪಾತ್ರ ಹಾಗೂ ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ಅವರನ್ನೊಳಗೊಂಡ ಪೀಠ ಬಹು ದಿನಗಳ ನಿರೀಕ್ಷೆಯ ತೀರ್ಪನ್ನು ಹೊರಗೆಡಹಲಿದೆ. ವಿಚಾರಣೆ ವೇಳೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಸುಪ್ರಿಂಕೋರ್ಟ್ ಟಾಡಾ ಬಂದಿಗಳ ಬಿಡುಗಡೆಗೆ ಹಸಿರು ನಿಶಾನೆ ತೋರುವುದೋ ಇಲ್ಲವೋ ಎಂಬ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.
6ನೇ ಸಂಧಾನ ಯಾತ್ರೆ ಮಂಗಳವಾರ : ನಕ್ಕೀರನ್ ಗೋಪಾಲ್, ಪಿ.ನೆಡುಮಾರನ್, ಪ್ರೊ.ಕಲ್ಯಾಣಿ ಹಾಗೂ ಸುಕುಮಾರನ್ ವೀರಪ್ಪನ್ ಜೊತೆಗೆ 6ನೇ ಸಂಧಾನಕ್ಕಾಗಿ ಮಂಗಳವಾರ ಕಾಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಮಂಗಳವಾರದ ಈ ಎರಡು ಪ್ರಮುಖ ವಿಷಯಗಳು ಮಸುಕಾಗಿದ್ದ ವರನಟನ ಬಿಡುಗಡೆ ವಿಚಾರಕ್ಕೆ ಮತ್ತೆ ಗರಿ ಮೂಡಿಸಿವೆ. ಈಗಾಗಲೇ ಸುಪ್ರಿಂಕೋರ್ಟ್ ಯಾವ ತೀರ್ಪು ನೀಡಿದೆ ಎಂದು ಕೇಳಿ ಅನೇಕ ಹೊರನಾಡಿನ ಕನ್ನಡಿಗರು ಕನ್ನಡ.ಇಂಡಿಯಾ ಇನ್ಫೋಗೆ ಇ-ಮೇಲ್ಗಳನ್ನು ಕಳುಹಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ