ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಂಗಾ ಪೂಜೆ ಅನುಕರಿಸಲು ಹೋದ 4 ಮಕ್ಕಳು ನೀರು ಪಾಲು
ಮಂಡ್ಯ : ಇಲ್ಲಿನ ಹೆಮ್ಮಿಗೆ ಬಳಿಯ ಹೆಬ್ಬಳ್ಳ ನಾಲೆಯಲ್ಲಿ ಭಾನುವಾರ ಸಂಜೆ ನಾಲ್ವರು ಮಕ್ಕಳು ಗಂಗಾ ಪೂಜೆಯನ್ನು ಅನುಕರಿಸಿ ಆಟವಾಡಲು ಹೋಗಿ ನೀರು ಪಾಲಾಗಿರುವುದಾಗಿ ವರದಿಯಾಗಿದೆ.
ಐದು ವರ್ಷ ವಯಸ್ಸಿನ ಪೂರ್ವಿಕ ಅರಸ್ ಮತ್ತು ಅರ್ಪಿತ ಅರಸ್, 8 ವರ್ಷಗಳ ಪ್ರತೀಕ್ ಅರಸ್ ಮತ್ತು ಏಳು ವರ್ಷದ ಚೈತ್ರ ಮೃತರಾಗಿದ್ದಾರೆ. ಪೂರ್ವಿಕಳ ಹೊರತಾಗಿ ಉಳಿದ ಎಲ್ಲ ಮಕ್ಕಳ ಶವ ಹೆಬ್ಬಳ್ಳದಿಂದ 12 ಕಿ.ಮೀ ದೂರದಲ್ಲಿ ದೊರೆತಿದೆ.
ಪೂರ್ವಿಕ ಮತ್ತು ಪ್ರತೀಕ್ ಹೆಮ್ಮಿಗೆಯ ರಾಜೇ ಅರಸ್ರ ಮಕ್ಕಳಾಗಿದ್ದು, ಅವರ ತಂಗಿಯ ಮಗಳು ಅರ್ಪಿತ ಮತ್ತು ಚಿಕ್ಕಪ್ಪನ ಮೊಮ್ಮಗಳು ಚೈತ್ರ ಎಂದು ತಿಳಿದು ಬಂದಿದೆ. ರಾಜೇ ಅರಸ್ರ ಪತ್ನಿ ಕೆಲ ದಿನಗಳ ಹಿಂದೆ ಗಂಗಾ ಪೂಜೆಗೆ ಹೋದಾಗ ಮಕ್ಕಳೂ ಅವರನ್ನು ಹಿಂಬಾಲಿಸಿದ್ದರು. ಪೂಜೆಯನ್ನು ಅನುಕರಿಸಿ ಆಡುತ್ತಿದ್ದಾಗ ಮಕ್ಕಳು ನೀರು ಪಾಲಾಗಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿಲ್ಲ .
(ಇನ್ಫೋ ವಾರ್ತೆ)
Comments
Story first published: Monday, November 6, 2000, 5:30 [IST]