Get Updates
Get notified of breaking news, exclusive insights, and must-see stories!

ಮಹಿಳೆಯಾಂದಿಗೆ ಐಎಎಸ್‌ ಅಧಿಕಾರಿ ಅನುಚಿತ ವರ್ತನೆ ತನಿಖೆಗೆ ಆದೇಶ

ಬೆಂಗಳೂರು : ಇತ್ತೀಚೆಗೆ ದೆಹಲಿಯ ಆಂಧ್ರ ಭವನದಲ್ಲಿ ಮಹಿಳೆಯಾಬ್ಬರೊಂದಿಗೆ ರಾಜ್ಯ ಸರಕಾರದ ಐಎಎಸ್‌ ಅಧಿಕಾರಿಯಾಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಮಹಿಳೆ ಈ ಸಂಬಂಧ ಮೊಕದ್ದಮೆ ದಾಖಲಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ಇಲ್ಲ . ಆದರೆ ಈ ಕುರಿತ ವರದಿಗಳನ್ನಾಧರಿಸಿ ಹಿರಿಯ ಐಎಎಸ್‌ ಅಧಿಕಾರಿಯಾಬ್ಬರಿಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಸಚಿವರು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

ಏಳು ಕೈಗಾರಿಕೆಗಳನ್ನು ಮುಚ್ಚಲು ಆದೇಶ : ನಗರದ ಬೆಳ್ಳಂದೂರು ಕೆರೆಯ ನೀರನ್ನು ಕಲುಷಿತಗೊಳಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಆ ಪ್ರದೇಶದ ಏಳು ಕೈಗಾರಿಕಾ ಘಟಕಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಕೆ. ಎಚ್‌. ರಂಗನಾಥ್‌ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬಿಜೆಪಿಯ ಮುಖ್ಯಮಂತ್ರಿ ಚಂದ್ರು ಹಾಗೂ ಪಿ. ರಾಮಯ್ಯ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೆರೆ ನೀರು ಕಲುಷಿತಗೊಳಿಸುತ್ತಿರುವ ಬಗ್ಗೆ ಸದನ ಸಮಿತಿಯನ್ನು ನೇಮಿಸಿ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ರಾಜ್‌ ಪ್ರಕರಣ ಪ್ರತಿಕ್ರಿಯೆಗೆ ನಕಾರ : ರಾಜ್‌ ಅಪಹರಣ ವಿಷಯ ಮಂಗಳವಾರ ಸದನದಲ್ಲಿ ಮತ್ತೆ ಪ್ರಸ್ತಾಪವಾದಾಗ ಹೇಳಿಕೆ ನೀಡಲು ಸರಕಾರ ನಿರಾಕರಿಸಿತು. ಪ್ರಕರಣದ ಸಂಬಂಧ ಕೆಲವು ಮೊಕದ್ದಮೆಗಳು ಕೋರ್ಟ್‌ನಲ್ಲಿರುವುದರಿಂದ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ ವಿಧಾನಪರಿಷತ್ತಿನಲ್ಲಿ ಹೇಳಿದರು.

ಅಪಹರಣದ ಸಂಬಂಧ ಸರಕಾರ ಮುಂದೆ ತೆಗೆದುಕೊಳ್ಳುವ ಕ್ರಮಗಳನ್ನು ವಿವರಿಸಬೇಕಂದು ಬಿ. ಎಸ್‌. ಎಡಿಯೂರಪ್ಪ , ಶಂಕರಮೂರ್ತಿ ಒತ್ತಾಯಿಸಿದರು. ವಾಗ್ವಾದ ಮುಂದುವರಿಯುತ್ತಿದ್ದಾಗ ಮದ್ಯೆ ಪ್ರವೇಶಿಸಿದ ಸಂಯುಕ್ತ ಜನತಾದಳದ ಎಂ. ಪಿ. ಪ್ರಕಾಶ್‌ ಮತ್ತು ಜನತಾದಳದ ಬಿ. ಎಲ್‌. ಶಂಕರ್‌ ಕೋರ್ಟ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿರುವ ಈ ಹಂತದಲ್ಲಿ ಮಾತನಾಡುವುದು ಸರಿಯಲ್ಲ . ಕೋರ್ಟ್‌ ಎರಡೂ ಸರಕಾರಗಳನ್ನು ಟೀಕಿಸಿದ್ದರೂ ತೀರ್ಪು ಬೇರೆಯೇ ಇರಬಹುದು ಆದ್ದರಿಂದ ಚರ್ಚೆ ಆನಗತ್ಯ ಎಂದು ಸಲಹೆ ಮಾಡಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+