ಹೋಮೋ ಸೇಪಿಯನ್ಸ್ ಭವಿತವ್ಯ ಎಷ್ಟು ಸರಳವಾಗಲಿದೆ?
ನಾಗರೀಕತೆ ಬೆಳೆಯುತ್ತಾ ಹೋದಂತೆ ತಂತ್ರಜ್ಞಾನದಲ್ಲೂ ಅಭಿವೃದ್ಧಿಯಾಯಿತು. ಅದು ಮಾಹಿತಿ ಕ್ಷೇತ್ರಕ್ಕೂ ಕಾಲಿಟ್ಟು, ಜನಜೀವನದಲ್ಲಿ ಹಾಸುಹೊಕ್ಕಾಯಿತು. ತಂತುಗಳ ಸಹಾಯದಿಂದ ನಡೆಯುತ್ತಿದ್ದ ಸಂವಹನೆ ಮತ್ತಷ್ಟು ಅಭಿವೃದ್ಧಿ ಹೊಂದಿ ಕಾರ್ಡ್ಲೆಸ್ ಜಗತ್ತು ಹುಟ್ಟಿಕೊಂಡಿದೆ. ಅಗೋಚರ ಜಾಲ ಎಲ್ಲರನ್ನೂ ಬಂಧಿಸಿಟ್ಟಿದೆ, ಹತ್ತಿರಕ್ಕೆ ತಂದಿದೆ. ಸರ್ಕಾರಗಳೂ ತಮ್ಮ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿ-ವೆ. ಇ- ಆಡಳಿತ ಈಗಾಗಲೇ ಎಷ್ಟೋ ಕ್ಷೇತ್ರಗಳಲ್ಲಿ ಹಳ-ತು.
ಅಪ್ಪ ಕುಂತಲ್ಲೇ ಚಾ ಸವಿಯುತ್ತಾ ವ್ಯಾಪಾರ ಮಾಡುತ್ತಿದ್ದರೆ, ಮಗ ಯಾವುದೋ ಆನ್ಲೈನ್ ಕೋರ್ಸ್ ಮಾಡುತ್ತಿದ್ದಾನೆ. ಅಮ್ಮ ಮಹಿಳಾ ಸಂಘಟನೆಗಳನ್ನೆಲ್ಲಾ ಒಂದು ಜಾಲದಡಿ ತರುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಫ್ಯಾಷನ್ ಡಿಸೈನರ್ ಆಗಿರುವ ಮಗಳು ಹೊಸ ವಿನ್ಯಾಸವನ್ನು ರೂಪಿಸುತ್ತಿದ್ದಾಳೆ. ಎಲ್ಲಾ ಕೆಲಸಗಳೂ ಬೆರಳುಗಳ ತುದಿಗಳಲ್ಲೇ ನಡೆಯುತ್ತಿವೆ!
ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಯಾದಿಯಲ್ಲಿರುವ ಭಾರತ ತೀವ್ರ ಗತಿಯ ಮಾಹಿತಿ ಮತ್ತು ತಂತ್ರಜ್ಞಾನದ ಬದಲಾವಣೆಗೆ ಸ್ಪಂದಿಸುತ್ತಿದೆಯೇ? ನಮ್ಮ ದೇಶಕ್ಕೆ ಇದು ಬೇಕೆ? ಜನ ಈ ಬದಲಾವಣೆಗೆ ಯಾವ ರೀತಿಯಲ್ಲಿ ಸನ್ನದ್ಧರಾಗಬೇಕು? ಹೋಮೋ ಸೇಪಿಯನ್ಸ್ ಭವಿತವ್ಯ ಎಷ್ಟು ಸರಳವಾಗಲಿದೆ?....
ಈ ಎಲ್ಲಾ ಪ್ರಶ್ನೆಗಳಿಗೆ ನವಂಬರ್ 2 ಹಾಗೂ 3ರಂದು ಹೊಟೇಲ್ ಲೀ ಮೆರಿಡಿಯನ್ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಉತ್ತರ ಸಿಗಲಿದೆ. ಐಟಿ ನುರಿತರು, ಉದ್ಯಮಿಗಳು, ಸಂಶೋಧಕರು, ಕಾರ್ಪೊರೇಟ್ ಧುರೀಣರು ಈ ವಿಷಯಗಳ ಬಗೆಗೆ ಮಾತನಾಡಲಿದ್ದಾರೆ. ಸಮಾವೇಶ ವಿಪ್ರೋ ಹಾಗೂ ನಾರ್ಟೆಲ್ ನೆಟ್ವರ್ಕ್ಸ್ ಸಹಯೋಗದಲ್ಲಿ ನಡೆಯಲಿದೆ. ಮುಂದಿನ ಜನಾಂಗಕ್ಕೆ ತಂತ್ರಜ್ಞಾನದ ಕೊಡುಗೆ, ಹಾದಿ, ತಿರುಳು, ಬರಲಿರುವ ದಿನಗಳ ವ್ಯಾಪಾರದ ಸ್ವರೂಪ .... ಎಲ್ಲವುಗಳ ಪಕ್ಷಿನೋಟ ಸಮಾವೇಶದಲ್ಲಿ ಸಿಗಲಿದೆ.
( ಇನ್ಫೊ ವಾರ್ತೆ )
ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications