ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಣಿಪಾಲದಲ್ಲಿ ಮೂರು ದಿನ-ಗ-ಳ ಇಎನ್ಟಿ ಕಾರ್ಯಾಗಾರ
ಮಣಿಪಾಲ : ಮೂರು ದಿನಗಳ ಕಣ್ಣು, ಕಿವಿ ಮತ್ತು ಮೂಗು ತಪಾಸಣಾ ಕಾರ್ಯಾಗಾರವು ಮಣಿಪಾಲದಲ್ಲಿ ಭಾನುವಾರ ಆರಂಭವಾಯಿತು.
ಕಿವಿಯ ತೊಂದರೆಯಿರುವ ರೋಗಿಗಳನ್ನು ಗುರುತಿಸಿ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಅವರ ಕಿವುಡುತನವನ್ನು ನಿವಾರಿಸುವ ಉದ್ದೇಶದಿಂದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ ಈ ಕಾರ್ಯಾಗಾರವನ್ನು ಆಯೋಜಿಸಿದೆ. ಕಾರ್ಯಾಗಾರದಲ್ಲಿ ನಿವಾರಿಸಲಾಗದ ಸಹಜ ಕಿವುಡುತನಕ್ಕೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಕುರಿತು ಮಾಹಿತಿ ಒದಗಿಸಲಾಗುವುದು. ಇಎನ್ಟಿ ತಜ್ಞರಿಗೆ ಹೆಚ್ಚಿನ ತರಬೇತಿ ನೀಡುವುದೂ ಈ ಕಾರ್ಯಾಗಾರದ ಉದ್ದೇಶವಾಗಿದೆ.
(ಇನ್ಫೋ ವಾರ್ತೆ)
Comments
Story first published: Tuesday, October 31, 2000, 5:30 [IST]