ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಟ್ಟಾರ ಚೌಕಿಯ ನೀರಿನಲ್ಲಿ ಮುಳುಗಿ 2 ಸಾವು
ಮಂಗಳೂರು: ಇಲ್ಲಿನ ಕೊಟ್ಟಾರ ಚೌಕಿಯ ಕಲ್ಲಿನ ಕೋರೆ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ಭಾನುವಾರ ಮೃತಪಟ್ಟಿದ್ದಾರೆ.
ಕೂಲಿ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದ ಸಂಗಪ್ಪ (20) ಮತ್ತು ಮಲ್ಲಪ್ಪ (16) ಮೂಲತಃ ಭದ್ರಾವತಿಯವರೆಂದು ಗುರುತಿಸಲಾಗಿದೆ. ಒಬ್ಬನ ಶವ ತಕ್ಷಣವೇ ಪತ್ತೆಯಾಗಿದ್ದು, ಇನ್ನೊಂದು ಶವವನ್ನು ಅಗ್ನಿಶಾಮಕ ದಳದವರು ಪತ್ತೆ ಮಾಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
(ಇನ್ಫೋ ವಾರ್ತೆ)
Comments
Story first published: Thursday, October 12, 2000, 5:30 [IST]