Get Updates
Get notified of breaking news, exclusive insights, and must-see stories!

ಕೋರ್ಟ್‌ ಕಟ್ಟಡಗಳ ಪರಿಸ್ಥಿ-ತಿ : ವರದಿ- ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು : ಕೋರ್ಟ್‌ ಕಟ್ಟಡಗಳ ಹಾಗೂ ಜಿಲ್ಲಾ ನ್ಯಾಯಲಯದ ವ್ಯಾಪ್ತಿಯಲ್ಲಿ ಬರುವ ಕೋರ್ಟ್‌ ಸಿಬ್ಬಂದಿಯ ವಸತಿಗೃಹಗಳ ಪ್ರಸ್ತುತ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾ ಕೋರ್ಟ್‌ ನ್ಯಾಯೋಶರಿಗೆ ಹೈಕೋರ್ಟ್‌ ಶುಕ್ರವಾರದಂದು ನಿರ್ದೇಶಿಸಿದೆ.

ಕೋರ್ಟಿಗೆ ಸಂಬಂಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯಸರಕಾರಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ, -ಹಂ-ಗಾ-ಮಿ ಮುಖ್ಯ ನ್ಯಾಯಾಧೀಶ ಅಶೋಕ್‌ ಭಾನ್‌ ಮತ್ತು ನ್ಯಾಯಮೂರ್ತಿ ಆರ್‌. ಗುರುರಾಜನ್‌ ಅವರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಜಿಲ್ಲಾ ನ್ಯಾಯಲಯಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಸಿಬ್ಬಂದಿ ವರ್ಗ ಮತ್ತು ಅವರ ವಸತಿ ಗೃಹಗಳ ಕುರಿತು ವಿವರವಾದ ವರದಿ ನೀಡುವಂತೆ ಹೈಕೋರ್ಟ್‌ ಹೇಳಿದೆ. ಬೆಂಗಳೂರಿನ ವಕೀಲ ಎಸ್‌.ಎನ್‌. ಪ್ರಶಾಂತ್‌ ಚಂದ್ರ, ಎಂ. ಎಂ. ಮಂಕೀಕರ್‌ ಮತ್ತು ಡಾ. ಕೆ. ಇ. ನಾಗಭೂಷಣ್‌ ಹಾಗೂ ಕುಣಿಗಲ್‌ ವಕೀಲ ಕೃಷ್ಣ ರಾಜ್‌ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರತಿಗಳನ್ನು ಪ್ರತೀ ಜಿಲ್ಲಾ ನ್ಯಾಯಾಲಯಗಳಿಗೆ ಕಳಿಸುವಂತೆ ಹೈಕೋರ್ಟ್‌ನ ಮುಖ್ಯ ರೆಜಿಸ್ಟ್ರಾರ್‌ಗೆ ಸೂಚಿಸಲಾಗಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್‌ 23 ಕ್ಕೆ ಮುಂದೂಡಲಾಗಿದೆ.

ರಾಜ್ಯ ಸರಕಾರ ಮೂಲ ಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಕೇಸುಗಳು ಬೇಗನೆ ಇತ್ಯರ್ಥವಾಗಬೇಕಾದರೆ ಮೂಲಭೂತ ಸೌಕರ್ಯಗಳೂ ಅಗತ್ಯ. ಹೊಸ ಜಿಲ್ಲೆಗಳಲ್ಲಿ ಕಟ್ಟಡಗಳು ಇಲ್ಲದೇ ಇರುವುದರಿಂದ ಜಿಲ್ಲಾ ನ್ಯಾಯಲಯಗಳ ರಚನೆಯಾಗಿಲ್ಲ . ಇರುವ ಕೋರ್ಟಿನಲ್ಲಿ ಸಿಬ್ಬಂದಿಗಳೂ ಸಾಕಷ್ಟು ಮಂದಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಕೇಂದ್ರ ಸರಕಾರ, ನ್ಯಾಯಾಲಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಹಣ ಮಂಜೂರು ಮಾಡಲು ತಯಾರಾಗಿದ್ದರೂ ರಾಜ್ಯ ಸರಕಾರ ಮುಂದೆ ಬರದೇ ಇರುವುದರಿಂದ ಎಲ್ಲಾ ಯೋಜನೆಗಳೂ ನೆನೆಗುದಿಗೆ ಬೀಳುತ್ತಿವೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+