Get Updates
Get notified of breaking news, exclusive insights, and must-see stories!

ಕೊಲ್ಲೂ-ರು : 28 ವರ್ಷಗಳ ನಂತರ ಬ್ರಹ್ಮಕಲಶೋತ್ಸವ

ಕೊಲ್ಲೂರು : ಮುಂದಿನ ವರ್ಷ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಪ್ರತಿ 12 ವರ್ಷಕ್ಕೊಮ್ಮೆ ವಿಧ್ಯುಕ್ತವಾಗಿ ಬ್ರಹ್ಮ ಕಲಶೋತ್ಸವ ನಡೆಯಬೇಕಾಗಿದ್ದು, ಕಳೆದ 28 ವರ್ಷಗಳಿಂದ ಕೊಲ್ಲೂರು ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವ ನಡೆದಿರಲಿಲ್ಲ . ಮುಂದಿನ ವರ್ಷ ನಡೆಯಲಿರುವ ಬ್ರಹ್ಮ ಕಲಶೋತ್ಸವದ ತಯಾರಿ ಕೊಲ್ಲೂರಿನಲ್ಲಿ ಆರಂಭವಾಗಿದೆ. ಸುಮಾರು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ದ್ವಾರದ ಕಾಮಗಾರಿ ನಡೆಯುತ್ತಿದೆ. ಒಂದು ಕೋಟಿ ರೂಪಾಯಿ ಖರ್ಚಿನಲ್ಲಿ ಯಾತ್ರಿಕರ ವಸತಿ ಗೃಹ ನಿರ್ಮಾಣ ಹಂತದಲ್ಲಿದೆ.
ವಿದ್ಯಾರಂಭ : ಅಕ್ಟೋಬರ್‌ ಏಳರ ವಿಜಯದಶಮಿಯಂದು ಶ್ರೀ ಕ್ಷೇತ್ರದಲ್ಲಿ 700 ಮಂದಿ ಪುಟಾಣಿಗಳಿಗೆ ವಿದ್ಯಾರಂಭ ಮಾಡಲಾಯಿತು. ದೇಶದ ವಿವಿಧೆಡೆಗಳಿಂದ ದೇವಿ ಸನ್ನಿಧಿಗೆ ಬಂದ ಭಕ್ತರ ಪುಟ್ಟ ಮಕ್ಕಳು ಪ್ರಥಮ ಬಾರಿಗೆ ಬೆರಳಿನಲ್ಲಿ ಅಕ್ಷರ ಬರೆದರು.

(ಇನ್ಫೋ ವಾರ್ತೆ)

  • ಮುಖಪುಟ / ಊರು ಕೇರಿ
  • More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+