ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂ-ರು : 28 ವರ್ಷಗಳ ನಂತರ ಬ್ರಹ್ಮಕಲಶೋತ್ಸವ

By Staff
|
Google Oneindia Kannada News

ಕೊಲ್ಲೂರು : ಮುಂದಿನ ವರ್ಷ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಪ್ರತಿ 12 ವರ್ಷಕ್ಕೊಮ್ಮೆ ವಿಧ್ಯುಕ್ತವಾಗಿ ಬ್ರಹ್ಮ ಕಲಶೋತ್ಸವ ನಡೆಯಬೇಕಾಗಿದ್ದು, ಕಳೆದ 28 ವರ್ಷಗಳಿಂದ ಕೊಲ್ಲೂರು ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವ ನಡೆದಿರಲಿಲ್ಲ . ಮುಂದಿನ ವರ್ಷ ನಡೆಯಲಿರುವ ಬ್ರಹ್ಮ ಕಲಶೋತ್ಸವದ ತಯಾರಿ ಕೊಲ್ಲೂರಿನಲ್ಲಿ ಆರಂಭವಾಗಿದೆ. ಸುಮಾರು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ದ್ವಾರದ ಕಾಮಗಾರಿ ನಡೆಯುತ್ತಿದೆ. ಒಂದು ಕೋಟಿ ರೂಪಾಯಿ ಖರ್ಚಿನಲ್ಲಿ ಯಾತ್ರಿಕರ ವಸತಿ ಗೃಹ ನಿರ್ಮಾಣ ಹಂತದಲ್ಲಿದೆ.
ವಿದ್ಯಾರಂಭ : ಅಕ್ಟೋಬರ್‌ ಏಳರ ವಿಜಯದಶಮಿಯಂದು ಶ್ರೀ ಕ್ಷೇತ್ರದಲ್ಲಿ 700 ಮಂದಿ ಪುಟಾಣಿಗಳಿಗೆ ವಿದ್ಯಾರಂಭ ಮಾಡಲಾಯಿತು. ದೇಶದ ವಿವಿಧೆಡೆಗಳಿಂದ ದೇವಿ ಸನ್ನಿಧಿಗೆ ಬಂದ ಭಕ್ತರ ಪುಟ್ಟ ಮಕ್ಕಳು ಪ್ರಥಮ ಬಾರಿಗೆ ಬೆರಳಿನಲ್ಲಿ ಅಕ್ಷರ ಬರೆದರು.

(ಇನ್ಫೋ ವಾರ್ತೆ)

  • ಮುಖಪುಟ / ಊರು ಕೇರಿ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X