ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಅಪಹರಣದಲ್ಲಿ ಕೇಂದ್ರ ನುಣುಚಿಕೊಳ್ಳುವಂತಿಲ್ಲ ಮೊಯಿಲಿ
ಹುಬ್ಬಳ್ಳಿ: ರಾಜ್ ಅಪಹರಣದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ತೆರಿಗೆ ಸುಧಾರಣೆ ಆಯೋಗದ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ್ದ ಮೊಯಿಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅಪಹರಣ ಕುರಿತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಕೇಂದ್ರ ಗೃಹ ಸಚಿವ ಅಡ್ವಾಣಿ ಸ್ಪಷ್ಟ ಮಾತುಗಳಲ್ಲಿ ಹೇಳಬೇಕು ಎಂದಿರುವ ಮೊಯಿಲಿ, ಅಪಹರಣ ಪ್ರಕರಣ ಅಂತಾರಾಜ್ಯ ಸಮಸ್ಯೆಯಾಗಿರುವುದು ಕಷ್ಟಗಳನ್ನು ತಂದೊಡ್ಡಿದೆ ಎಂದು ಹೇಳಿದ್ದಾರೆ.
ಈ ಹಂತದಲ್ಲಿ ಕೇಂದ್ರದ ಮಧ್ಯಪ್ರವೇಶಕ್ಕೆ ಯಾರೂ ಒತ್ತಾಯಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ಕೇಂದ್ರವೇ ಸೂಕ್ಷ್ಮವಾಗಿ ವರ್ತಿಸಬೇಕೆಂದು ಹೇಳಿರುವ ಮೊಯಿಲಿ, ಅಪಹರಣ ಘಟನೆಯಿಂದ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿಲ್ಲ ಎಂದು ಹೇಳಿದ್ದಾರೆ.
Comments
Story first published: Sunday, October 8, 2000, 5:30 [IST]