ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದಿಂದ ಜಾನಪದ ಲೋಕದಲ್ಲಿ ಅಂತಾರಾಷ್ಟ್ರೀಯ ರೈತ ಸಮಾವೇಶ

By Staff
|
Google Oneindia Kannada News

ಬೆಂಗಳೂರು: ಒಂದು ವಾರ ನಡೆಯುವ ಅಂತಾರಾಷ್ಟ್ರೀಯ ರೈತ ಸಮಾವೇಶ ಇಲ್ಲಿಗೆ ಸಮೀಪದ ಜಾನಪದ ಲೋಕದಲ್ಲಿ ಶನಿವಾರ ಆರಂಭವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡಸ್ವಾಮಿ, ಸಮಾವೇಶದಲ್ಲಿ ರೈತ ಮಹಿಳೆಯರೂ ಸೇರಿದಂತೆ 64 ದೇಶಗಳ ವಿವಿಧ ರೈತ ಸಂಘಟನೆಗಳ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಅಕ್ಟೋಬರ್‌ ಎರಡರಂದು ರೈತರ ರ್ಯಾಲಿ ನಡೆಯಲಿದ್ದು, ನಂತರ ಮೂರನೇ ಅಂತಾರಾಷ್ಟ್ರೀಯ ರೈತ ಚಳುವಳಿಯ ಸಮಾವೇಶವು ಅಕ್ಟೋಬರ್‌ 3ರಿಂದ 6ರವರೆಗೆ ನಡೆಯಲಿದೆ.

ಮುಕ್ತ ಮಾರುಕಟ್ಟೆಯಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ದೇಶದ ಆಹಾರ ಸಾರ್ವಭೌಮತ್ವ, ಕೃಷಿರಂಗದಲ್ಲಿನ ಹೂಡಿಕೆ ಮತ್ತು ವ್ಯಾಪಾರ, ಜೀವವೈವಿಧ್ಯ, ಕೃಷಿ ಸುಧಾರಣೆ, ಮಾನವ ಹಕ್ಕು ಮತ್ತು ಮಹಿಳೆಯರ ಪಾತ್ರ ಮುಂತಾದ ವಿಷಗಳನ್ನು ಕುರಿತು ಚರ್ಚಿಸಲಾಗುವುದೆಂದು ನಂಜುಂಡಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X