ಮಂಗಳೂರು ಫಸ್ಟ್ , ಮಂಡ್ಯ ಲಾಸ್ಟ್ : ಮುಖ್ಯಮಂತ್ರಿ
ಮಂಗಳೂರು : ಮಂಗಳೂರು, ಕ್ಷಮಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ - ಆ ಜಿಲ್ಲೆಯವರು ಎಲ್ಲರಿಗಿಂತ ಮೊದಲು. ಓದಿನಲ್ಲಿ, ತಂತ್ರಜ್ಞಾನದಲ್ಲಿ ಅದು ಬಹಳ ಮುಂದೆ. ಬೆಂಗಳೂರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹೆಸರು ಮಾಡಿದೆಯೋ ಹಾಗೆಯೇ ಮಂಗಳೂರು ವಿಶ್ವ ಭೂಪಟದಲ್ಲಿ ಪ್ರಾಮುಖ್ಯತೆ ಪಡೆದಿದೆ.
ಇದು ಯಾರೋ ಹೇಳಿದ ಮಾತಲ್ಲ. ನಮ್ಮ ರಾಜ್ಯದ ಹೈಟೆಕ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದ ಹೆಮ್ಮೆಯ ಮಾತು. ಅವರು ಬರೀ ಇಷ್ಟೇ ಹೇಳಿದ್ದರೆ, ಬರಿ ಹೊಗಳಿಕೆಯ ಮಾತು ಎಂದಷ್ಟೇ ಅನ್ನಿಸುತ್ತಿತ್ತು. ಆದರೆ ಅವರು ನೀಡಿರುವ ಉಪಮೆ - ಹೋಲಿಕೆ ಎಲ್ಲರ ಹುಬ್ಬೇರಿಸಿದೆ.
‘ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಪ್ರಕಟವಾದಾಗ ನಿಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ನನ್ನ ಮಂಡ್ಯ ಜಿಲ್ಲೆ ಲಾಸ್ಟ್ನಲ್ಲಿರುತ್ತೆ. ಇದೇ ನನ್ನ ಮತ್ತು ನಿಮ್ಮ ಜಿಲ್ಲೆಯ ನಡುವಿನ ವ್ಯತ್ಯಾಸ ’ ಎಂದು ಮುಖ್ಯಮಂತ್ರಿಗಳು ಸೋಮವಾರ ಮಂಗಳೂರಿನಲ್ಲಿ ಹೇಳಿದಾಗ ಚಪ್ಪಾಳೆಯ ಸುರಿಮಳೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಗಳಿ ಮಾತನಾಡಿದ ಕೃಷ್ಣ, ಬೆಂಗಳೂರಿನಷ್ಟೇ ಮಂಗಳೂರೂ ಹೆಸರು ಗಳಿಸಿದೆ. ಇಲ್ಲಿನವರು ಸುಶಿಕ್ಷಿತರು, ಬುದ್ಧಿವಂತರು ಮಿಗಿಲಾಗಿ ದೂರದೃಷ್ಟಿ ಉಳ್ಳವರು ಎಂದು ಕೊಂಡಾಡಿದರು. ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ, ಹೆಸರಾಂತ ಉದ್ಯಮಗಳ ಉನ್ನತ ಸ್ತರದಲ್ಲಿ ದಕ್ಷಿಣ ಕನ್ನಡದ ಮಂದಿ ಇರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊನೆ ಸಿಡಿ : ಮಂಗಳೂರಿನ ವೇದಿಕೆಯಲ್ಲಿ ಅಲ್ಲಿನ ಮಂದಿಯನ್ನು ಮೆಚ್ಚಿಸಲು ಮುಖ್ಯಮಂತ್ರಿ ಏನೋ, ಇರುವ ವಿಷಯವನ್ನು ಇದ್ದಂತೆ ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಮಂಡ್ಯದ ಮಂದಿ ತಮ್ಮನ್ನು ಅನ್ಯ ಜಿಲ್ಲೆಯಲ್ಲಿ ಹೀಗಳೆದ ಬಗ್ಗೆ ರೊಚ್ಚಿಗೆದ್ದರೇನು ಗತಿ ಎಂದು ಕೃಷ್ಣ ಯೋಚಿಸದಿರುವುದು ಆಶ್ಚರ್ಯವೇ ಸರಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications