ಭಾರತೀಯ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನದ ಹಕ್ಕು?
ನವದೆಹಲಿ : ಪ್ರಪ್ರಥಮ ಬಾರಿಗೆ ಭಾರತದಲ್ಲಿನ ಮುಸ್ಲಿಂ ಮಹಿಳೆಯರು ತಮ್ಮ ಪತಿರಾಯರಿಗೆ ವಿವಾಹ ವಿಚ್ಛೇದನ ನೀಡುವ ಹಕ್ಕನ್ನು ಪಡೆಯುವ ಸಾಧ್ಯತೆ ಇದೆ.
ತಲಾಖ್, ತಲಾಖ್, ತಲಾಖ್ ಎಂದು ಹೇಳಿ ದಿಢೀರನೆ ವಿವಾಹ ವಿಚ್ಛೇದನ ಪಡೆವ ಹಕ್ಕು ಇನ್ನು ಮುಂದೆ ಮುಸ್ಲಿಂ ಗಂಡಸರಿಗೆ ಇಲ್ಲವಾಗುವ ಸಾಧ್ಯತೆಗಳೂ ಇವೆ. ವಿಚ್ಛೇದನವನ್ನು ವಾಸ್ತವ ನೆಲೆಗಟ್ಟಿನಲ್ಲಿ ಪಡೆಯಬೇಕೆಂಬ ಸಲಹೆ ಈಗ ಒಡಮೂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ಅಂಶಗಳು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ಬಿ) ಮಾಡಿರುವ ಶಿಫಾರಸುಗಳಲ್ಲಿ ಅಡಕವಾಗಿವೆ. ಈ ಲಾ ಬೋರ್ಡ್ ಮುಸ್ಲಿಮರ ಧಾರ್ಮಿಕ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಯಾಗಿದೆ. ಈ ಮಂಡಲಿಯು ಮುಸ್ಲಿಮರ ಮದುವೆಯ ಕರಾರಿಗೆ ಸಂಬಂಧಿಸಿದಂತೆ ಹೊಸ ನಿಖಾನಾಮದ ಕರಡನ್ನು ಸಹ ಸಿದ್ಧಪಡಿಸಿದೆ.
ಈ ಶಿಫಾರಸುಗಳು ಕಾನೂನಾಗಿ ಜಾರಿಗೆ ಬರುವ ಮುನ್ನ ಇದಕ್ಕೆ ಮುಸ್ಲಿಮ್ ಧರ್ಮಗುರುಗಳ ಸಮ್ಮತಿ ಬೇಕೇಬೇಕು. ಮುಸ್ಲಿಂ ಮಹಿಳೆಯಾಬ್ಬಳು ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಐದು ಕಾರಣಗಳನ್ನು ಮಂಡಳಿ ತನ್ನ ಸಲಹೆಗಳಲ್ಲಿ ಸೂಚಿಸಿದೆ. ಅವುಗಳೆಂದರೆ: ಆಕೆಯ ಪತಿ ಎರಡು ವರ್ಷಗಳ ಕಾಲ ಕಣ್ಮರೆಯಾದರೆ ಮತ್ತು ಪತ್ತೆಯೇ ಆಗದಿದ್ದರೆ, ಆತ ತನ್ನ ಪತ್ನಿಯ ಜೀವನೋಪಾಯಕ್ಕಾಗಿ ಒಂದು ವರ್ಷಗಳ ಕಾಲ ಪರಿಹಾರ ನೀಡಲು ನಿರಾಕರಿಸಿದರೆ, ಆತ ಒಂದೊಮ್ಮೆ ಹುಚ್ಚನಾಗಿದ್ದರೆ, ದಂಪತಿಗಳು ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿದ್ದರೆ, ಆಕೆಯ ಪತಿ ಘೋರ ಗುಪ್ತ ರೋಗಗಳಿಂದ ಬಳಲುತ್ತಿದ್ದರೆ ಅಥವಾ ಪತ್ನಿಗೆ ಕ್ರೂರವಾಗಿ ಹಿಂಸಿಸುತ್ತಾ ಜೀವ ಬೆದರಿಕೆ ಒಡ್ಡುತ್ತಿದ್ದರೆ ಆಕೆ ವಿಚ್ಛೇದನಕ್ಕೆ ಮುಂದಾಗಬಹುದು.
ಮುಸ್ಲಿಂ ಪುರುಷರು ತಲಾಖ್ ಹೇಳುವ ವಿಷಯಕ್ಕೂ ಕೆಲವು ನಿಬಂಧನೆಗಳನ್ನು ಮಂಡಲಿ ಸೂಚಿಸಿದೆ. ಈ ಶಿಫಾರಸುಗಳ ನೀಲನಕ್ಷೆ ಮಂಡಳಿಯ ಅಧ್ಯಕ್ಷ ಮೌಲಾನಾ ಮುಜಾಹಿದುಲ್ ಇಸ್ಲಾಮ್ ಕ್ವಾಸ್ಮಿ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠದಿಂದ ಅಂತಿಮ ರೂಪ ಪಡೆದಿದೆ. ಈ ಶಿಫಾರಸುಗಳಿಗೆ ಸಲಹೆ - ಸೂಚನೆಗಳನ್ನು ಮಂಡಲಿ ಆಹ್ವಾನಿಸಿದೆ. ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರ್ವಸದಸ್ಯರ ಸಭೆ ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಬೇಕಿದೆ.
( ಐಎಎನ್ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications