ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಯಚೂರಲ್ಲಿ ಮಳೆಯಿಂದ 4.64 ಕೋಟಿ ರೂ.ನಷ್ಟ
ರಾಯಚೂರು : ಆಗಸ್ಟ್ನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 4.64 ಕೋಟಿ ರೂಪಾಯಿಯ ಸರಕಾರಿ ಮತ್ತು ಖಾಸಗಿ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ಜಿಲ್ಲಾ ಧಿಕಾರಿ ಜಿ. ಕುಮಾರ್ ನಾಯಕ್ ಶನಿ-ವಾ-ರ ತಿಳಿ-ಸಿ-ದ್ದಾ-ರೆ..
ನಷ್ಟ ಅನುಭವಿಸುತ್ತಿರವ ವಿವಿಧ ತಾಲ್ಲೂಕುಗಳ ನಿವಾಸಿಗಳಿಗೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸುರಿಯುವ ಮಳೆಗೆ ರಾಯಚೂರು ಮತ್ತು ಮಾಣ್ವಿಯಲ್ಲಿ ಮನೆ ಕುಸಿದು ಬಿದ್ದಿರುವುದರಿಂದಾಗಿ ನಾಲ್ಕು ಮಂದಿ ಮೃತರಾಗಿದ್ದು, 79 ಮನೆಗಳು ಪೂರ್ತಿ ನಾಶಗೊಂಡಿವೆ. ಮಾಣ್ವಿ ಮತ್ತು ಲಿಂಗಸಗೂರು ಸೇರಿದಂತೆ, ಜಿಲ್ಲೆಯ ಹಲವು ಕಡೆ ರಸ್ತೆ, ಸೇತುವೆ, ಕಾಲುವೆಗಳು ಅಸ್ತವ್ಯಸ್ತವಾಗಿವೆ.
(ಇನ್ಫೋ ವಾರ್ತೆ)
Comments
Story first published: Sunday, September 10, 2000, 5:30 [IST]