ವೀರಪ್ಪನ್ಗೆ ಬಾನುಲಿ ಮನವಿ : ಈಗ ವಕೀಲ ವೇಣುಗೋಪಾಲ್ ಸರದಿ
ಬೆಂಗಳೂರು: ರಾಜ್ ಹಾಗೂ ಇತರ ಅಪಹೃತರನ್ನು ಬಿಡುಗಡೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣಾ , ರಾಜ್ ಕುಟುಂಬದ ಸದಸ್ಯರೂ ಸೇರಿದಂತೆ ಅನೇಕರು ವೀರಪ್ಪನ್ಗೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಗುರುವಾರ ವಕೀಲ ವೇಣುಗೋಪಾಲ್ ವೀರಪ್ಪನ್ಗೆ ಮನವಿ ಮಾಡಿದ್ದಾರೆ.
ಈ ವೇಣುಗೋಪಾಲ್, ವೀರಪ್ಪನ್ ಬಿಡುಗಡೆ ಮಾಡುವಂತೆ ಕೇಳಿರುವ ಟಾಡಾ ಆರೋಪಿಗಳ ಪರ ಯಾವುದೇ ಶುಲ್ಕ ಪಡೆಯದೆ ವಾದಿಸುತ್ತಿರುವ ವಕೀಲರು. ವಕೀಲರನ್ನು ದೂರವಾಣಿ ಮಾಲಕ ಸಂಪರ್ಕ ಮಾಡಿರುವ ಬೆಂಗಳೂರು ಆಕಾಶವಾಣಿ ಅವರ ಮನವಿಯನ್ನು ದೂರವಾಣಿಯಲ್ಲೇ ಮುದ್ರಿಸಿಕೊಂಡು ಗುರುವಾರ ಸಂಜೆ 6.50ಕ್ಕೆ ಪ್ರಸಾರ ಮಾಡಿತು.
ಬೇಡಿಕೆಯಂತೆ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಟಾಡಾ ಆರೋಪಿಗಳು ಮತ್ತು ತಮಿಳು ಉಗ್ರವಾದಿಗಳನ್ನು ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿವೆ. ಆದರೆ ಸುಪ್ರೀಂಕೋರ್ಟ್ ಪ್ರಕ್ರಿಯೆಗೆ ತಡೆ ನೀಡಿದೆ. ಎಲ್ಲ ಕಾನೂನುಬದ್ಧ ವಿಚಾರಣೆಗಳು ನಡೆಯಲು ಸಾಮಾನ್ಯವಾಗಿ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೆ ಒತ್ತೆಯಾಳುಗಳನ್ನು ಇಟ್ಟುಕೊಳ್ಳುವುದು ಉಚಿತವಲ್ಲ. ಅದರಲ್ಲೂ ವಯಸ್ಸಾಗಿರುವ ರಾಜ್ ಅವರನ್ನು ಇಟ್ಟುಕೊಳ್ಳದೆ ಅವರ ಸಹಚರರೊಟ್ಟಿಗೆ ಶೀಘ್ರ ಕಳಿಸಿಕೊಡಬೇಕೆಂದು ವೇಣುಗೋಪಾಲ್ ಮನವಿ ಮಾಡಿದ್ದಾರೆ.
ಕೈದಿಗಳನ್ನು ಬಂಧಿಸಿದ ದಿನದಿಂದಲೂ ತಾವು ಅವರ ಬಿಡುಗಡೆಗೆ ಶ್ರಮಿಸುತ್ತಿದ್ದು , ಕಾನೂನಿನಡಿಯಲ್ಲಿ ಏನು ಬೇಕೋ ಅದನ್ನೆಲ್ಲಾ ಯಾವುದೇ ಶುಲ್ಕ ಪಡೆಯದೆ ಮಾಡಲಾಗುತ್ತಿದೆ. ಅಂಥ ಪ್ರಯತ್ನ ಮುಂದೆಯೂ ಮುಂದುವರಿಯುತ್ತದೆ ಆದ್ದರಿಂದ ದಯಮಾಡಿ ಅಪಹೃತರನ್ನು ಬಿಟ್ಟುಕೊಡಬೇಕೆಂದು ವೇಣುಗೋಪಾಲ್ ಕೇಳಿಕೊಂಡಿದ್ದಾರೆ.
ಮುಖಪುಟ / ರಾಜ್ ಅಪಹರಣ / ಡಾ. ರಾಜಕುಮಾರ್ ಚಿತ್ರಾವಳಿ / ರಾಜಮಾರ್ಗ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications