ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಕುಮಾರ್ ಬಿಡುಗಡೆ ಆಗಿದೆಯಂತೆ, ನಿಜಾನಾ ಸಾರ್?
ಬೆಂಗಳೂರು : ರಾಜ್ಕುಮಾರ್ ಅವರ ಬಿಡುಗಡೆ ಆಯಿತಂತೆ ನಿಜವೇ ಸಾರ್? ನಮ್ಮ ಕಾರ್ಯಾಲಯಕ್ಕೆ ಬಂದ ಹತ್ತಾರು ದೂರವಾಣಿ ಕರೆಗಳೆಲ್ಲ ಕೇಳಿದ ಪ್ರಶ್ನೆ ಇದೊಂದೆ. ಬೆಂಗಳೂರಿನ ಕೆಲವು ಪತ್ರಿಕಾ ಕಾರ್ಯಾಲಯಗಳ ಸಿಬ್ಬಂದಿಗೂ ಈ ಅನುಭವ ಆಗಿದೆ.
ನಕ್ಕೀರನ್ ಪತ್ರಿಕೆಗೂ ಬಂದ ಅಸಂಖ್ಯಾತ ದೂರವಾಣಿ ಕರೆಗಳೆಲ್ಲ ಈ ಪ್ರಶ್ನೆಯನ್ನೇ ಕೇಳಿವೆ. ಚೆನ್ನೈನ ಪೊಲೀಸ್ ಕೇಂದ್ರ ಕಚೇರಿಗೂ ಕೆಲವು ದೂರವಾಣಿಗಳು ಬಂದಿವೆ ಎಂದು ತಿಳಿದು ಬಂದಿದೆ. ಗಣೇಶ ಚತುರ್ಥಿಗಾಗಿಯೇ ವೀರಪ್ಪನ್, ರಾಜ್ಕುಮಾರ್ ಅವರನ್ನು ಬಿಟ್ಟಿದ್ದಾನೆ ಎನ್ನುವ ವದಂತಿಗಳು ಗುರುವಾರ ಹಬ್ಬಿದ್ದವು.
ರಾಜ್ಕುಮಾರ್ ಅಪಹರಣವಾದ ದಿನದಿಂದಲೂ ವದಂತಿಗಳದೇ ಸಾಮ್ರಾಜ್ಯ ಆಗಿದೆ. ಈ ವದಂತಿಗಳ ಸಾಲಿನಲ್ಲಿ ಶುಭವಾರ್ತೆಯ ಈ ವದಂತಿಯೂ ಒಂದು ಎಂದಷ್ಟೇ ಹೇಳಬಹುದು. ಈ ಮಧ್ಯೆ ವೀರಪ್ಪನ್ ಹಾಗೂ ಗೋಪಾಲ್ ನಡುವೆ ಮಾತುಕತೆ ಮುಂದುವರಿದಿದೆ ಎಂದು ನಕ್ಕೀರನ್ ಮೂಲಗಳು ಸ್ಪಷ್ಟಪಡಿಸಿವೆ.
Comments
English summary
Rajkumar released, is it so?