ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಸಿಎಫ್‌ಗೆ ಮರು ಜೀವ ನೀಡಲು ಕೇಂದ್ರ ಬದ್ಧ

By Staff
|
Google Oneindia Kannada News

ಬೆಂಗಳೂರು : ಮುಚ್ಚುವ ಹಂತದಲ್ಲಿರುವ ಮಂಗಳೂರು ಕೆಮಿಕಲ್‌ ಫರ್ಟಿಲೈಸರ್‌ ಕಂಪೆನಿಗೆ ಕೇಂದ್ರ ಸರಕಾರ ಆರ್ಥಿಕ ಸಹಾಯ ನೀಡಲು ಉದ್ದೇಶಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಮಂತ್ರಿ ಸುರೇಶ್‌ ಪ್ರಭು ತಮಗೆ ಭರವಸೆ ನೀಡಿರುವುದಾಗಿ ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ಎಂಸಿಎಫ್‌ ರಾಜ್ಯದ ಏಕೈಕ ಗೊಬ್ಬರ ಕಾರ್ಖಾನೆಯಾಗಿದೆ. ಇದು ಉತ್ಪಾದನಾ ಕಾರ್ಯ ಸ್ಥಗಿತಗೊಳಿಸಿದರೆ ರಾಜ್ಯದ ರೈತರು ಸಂಕಷ್ಟಕ್ಕೀಡಾಗುವುದರಿಂದ ಈ ಕಾರ್ಖಾನೆಗೆ ಕೇಂದ್ರ ಸರಕಾರ ಸಹಾಯ ಮಾಡಲು ನಿರ್ಧರಿಸಿದೆ ಎಂದು ಕೃಷ್ಣ ಹೇಳಿದರು. ಸದ್ಯದಲ್ಲಿಯೇ ಕೈಗಾರಿಕಾ ಪುನಶ್ಚೇತನ ಮಂಡಳಿಯ ಮುಂದೆ ಈ ವಿಷಯ ಪ್ರಸ್ತಾಪವಾಗಲಿದೆ. ರಾಜ್ಯ ಸರಕಾರ ಕೂಡ ಕಾರ್ಖಾನೆಯ ಪುನಶ್ಚೇತನಕ್ಕೆ ಬದ್ಧವಾಗಿದ್ದು, ಕಾರ್ಖಾನೆಯಲ್ಲಿ ಗೊಬ್ಬರ ಉತ್ಪಾದನೆ ಇಳಿಮುಖವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X