ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತ ಔಷಧ ವಿಜ್ಞಾನ ಕಾಯ್ದೆಗೆ ತಿದ್ದುಪಡಿಯಾಗಬೇಕು - ರಾಜ್ಯಪಾಲೆ
ಬೆಂಗಳೂರು : ಔಷಧ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಅಧಿಕಾರ ಇರುವಂತೆಯೇ, ಭಾರತ ಔಷಧ ವಿಜ್ಞಾನ ಪರಿಷತ್ಗೂ ಹೆಚ್ಚಿನ ಅಧಿಕಾರ ನೀಡಬೇಕು ಎಂದು ರಾಜ್ಯಪಾಲೆ ವಿ.ಎಸ್. ರಮಾದೇವಿ ಹೇಳಿದ್ದಾರೆ.
ಅವರು ಶನಿವಾರ, ಭಾರತ ಔಷಧ ವಿಜ್ಞಾನ ಪರಿಷತ್ನ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಔಷಧ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇರುವ ಕಾಯ್ದೆ ದೋಷಪೂರಿತವಾಗಿದೆ. ಈಗಿರುವ ದ್ವಿ ನಿಯಂತ್ರಣ ಪದ್ಧತಿ (ತಾಂತ್ರಿಕ ಶಿಕ್ಷಣ ಪರಿಷತ್ ಮತ್ತು ಔಷಧ ವಿಜ್ಞಾನ ಪರಿಷತ್) ಕಾಯ್ದೆಗೆ ತಿದ್ದು ಪಡಿ ತರುವ ಮೂಲಕ ಔಷಧ ವಿಜ್ಞಾನ ಪರಿಷತ್ಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ರಮಾದೇವಿ ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ರೆಹಮಾನ್ ಮಾತನಾಡಿ ಸಂಸತ್ನಲ್ಲಿ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚೆಯಾಗಬೇಕು ಎಂದರು. ಸಮಾರಂಭದಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಅನಂತ ಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವೆ ನಫೀಜಾ ಫಜಲ್ ಹಾಜರಿದ್ದರು.
Comments
Story first published: Sunday, August 20, 2000, 0:00 [IST]