ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ಕ್‌ ಶೃಂಗ ಸಭೆಯ ಮೇಲೆ ಪರಿಣಾಮ ಬೀರದ ರಾಜ್‌ ಅಪಹರಣ

By Staff
|
Google Oneindia Kannada News

ಬೆಂಗಳೂರು : ಆಗಸ್ಟ್‌ 18 ಹಾಗೂ 19ರಂದು ನಡೆಯಲಿರುವ ‘ಸಾರ್ಕ್‌ ಶೃಂಗಸಭೆ- 2000’ ದ ಮೇಲೆ ರಾಜ್‌ ಅಪ-ಹ-ರ-ಣ --ಪ್ರ-ತಿ-ಕೂ-ಲ ಪರಿ-ಣಾ-ಮ ಬೀರಿ-ಲ್ಲ , ಸಮ್ಮೇ-ಳ-ನ-ದಲ್ಲಿ ಭಾಗವಹಿಸಲು ಮುಂದೆ ಬಂದಿರುವ ಯಾವ ರಾಷ್ಟ್ರವೂ ತನ್ನ ಹೆಜ್ಜೆಯನ್ನು ಹಿಂತೆಗೆದಿಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಅಧ್ಯಕ್ಷ ತಲ್ಲಂ ವೆಂಕಟೇಶ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದ ಅವರು, ರಾಜ್ಯದಲ್ಲಿ ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗೆಗೆ ಆತಂಕಗಳಿದ್ದರೂ, ಸುಮಾರು 150 ಸಾರ್ಕ್‌ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಸಭೆಯಲ್ಲಿ ಭಾಗವಹಿಸಲೊಪ್ಪಿರುವ ಯಾವ ರಾಷ್ಟ್ರವೂ ಈವರೆಗೆ ಒಪ್ಪಿಗೆಯನ್ನು ಹಿಂತೆಗೆದುಕೊಂಡಿಲ್ಲ ಎಂದರು.

ಕರ್ನಾಟಕ ಸರ್ಕಾರ ಮತ್ತು ಎಫ್‌ಕೆಸಿಸಿಐ ಜಂಟಿಯಾಗಿ ಈ ಸಭೆಯನ್ನು ಆಯೋಜಿಸಿದ್ದು, ಸಾರ್ಕ್‌ ರಾಷ್ಟ್ರಗಳ ನಡುವೆ ಪ್ರಾದೇಶಿಕ ಆರ್ಥಿಕ ಮತ್ತು ವಾಣಿಜ್ಯ ಸಂಸ್ಥೆ ಹುಟ್ಟುಹಾಕುವ ಉದ್ದೇಶ ಹೊಂದಿದೆ ಎಂದು ವೆಂಕಟೇಶ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X